ನಗರದಲ್ಲಿ ಇಂದು ಮತದಾರರಿಗೆ ಜಾಗೃತಿ, ವಿಶ್ವ ಮಹಿಳಾ ದಿನಾಚರಣೆ

ಗೌತಮ್ ಫೌಂಡೇಶನ್, ಶ್ರೀ ವಿಮೋಚನಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಶ್ರೀ ದುರ್ಗಾ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಇಂದು ಮಧ್ಯಾಹ್ನ 12 ಗಂಟೆಗೆ ರೋಟರಿ ಬಾಲಭವನದಲ್ಲಿ ಮತದಾರರಿಗೆ ಜಾಗೃತಿ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫೌಂಡೇಶನ್ ನಿರ್ದೇಶಕ ದುರುಗೇಶ್ ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್ ಮ. ಕರೆಣ್ಣವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಜಿ.ಪಂ. ಸಿಇಓ ಸುರೇಶ ಬಿ. ಇಟ್ನಾಳ್, ಪಾಲಿಕೆ ಎಸ್‌ಜೆಎಸ್‌ಆರ್‌ವೈ ಯೋಜನಾಧಿಕಾರಿ ಸುನಂದಮ್ಮ, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ, ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜೆ.ಸಿ. ಪ್ರಕಾಶ್, ಪಿಎಸ್‌ಐ ಜಯಶೀಲಾ, ಅಮೂಲ್ಯ ಸಾಕ್ಷರತಾ ಕೇಂದ್ರದ ರಾಜು ಪಾಟೀಲ್, ಸಂಘಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆ ರಮೇಶ್, ವಿಮುಕ್ತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣಮ್ಮ, ಸಂಕಲ್ಪ ಸ್ವಯಂ ಸೇವಾ ಸಂಸ್ಥೆಯ ಸುರೇಶ್ ಭಾಗವಹಿಸಲಿದ್ದಾರೆ. 

error: Content is protected !!