ದಿಗಂಬರ ಜೈನ ಸಮಾಜದ ಅಧ್ಯಕ್ಷರಾಗಿ ಸುನಿಲ್‍ಕುಮಾರ್

ದಿಗಂಬರ ಜೈನ ಸಮಾಜದ ಅಧ್ಯಕ್ಷರಾಗಿ ಸುನಿಲ್‍ಕುಮಾರ್

ದಾವಣಗೆರೆ, ಮಾ. 29- ನಗರದ ಶ್ರೀ ಆದಿನಾಥ ಜಿನಮಂದಿರದಲ್ಲಿ ನಡೆದ ದಿಗಂಬರ  ಜೈನ ಸಮಾಜದ ಶ್ರೀ ಮಹಾವೀರ ಸಂಘದ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ 25 ವರ್ಷಗಳಿಂದ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಉದ್ಯಮಿ ಸುನಿಲ್‍ಕುಮಾರ್ ಡಿ. ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಕಾರ್ಯದರ್ಶಿಯಾಗಿ  ಚಂದ್ರಪ್ರಭು ಬಿ.,  ಉಪಾಧ್ಯಕ್ಷರುಗಳಾಗಿ ಹಿರಿಯ ಪತ್ರಕರ್ತ ಎಸ್. ಬಿ. ಜಿನದತ್‌ ಮತ್ತು  ನೇಮಿರಾಜ್ ಡಿ. (ಅಕ್ಕಿ), ಸಹ-ಕಾರ್ಯದರ್ಶಿಯಾಗಿ ಪ್ರೀತಂ ಧುಂಡಸಿ, ಖಜಾಂಚಿಯಾಗಿ  ಧನ್ಯಕುಮಾರ್ ಬಿಳಿಚೋಡು, ಸಹ ಖಜಾಂಚಿಯಾಗಿ  ಅಶೋಕ್ ಡಿ. ಬೇತೂರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುದರ್ಶನ್‍ಕುಮಾರ್ ಎಂ.ಎ., ಆದಿನಾಥ್ ಎಸ್.,  ಅಜಿತ್ ಕುಮಾರ್ ಬಿ.ಎಸ್., ಟಾಕಪ್ಪ ಎಸ್.ಕೆ., ಪಾರ್ಶ್ವನಾಥ್ ಎಸ್.ಜಿ.,  ಪ್ರಶಾಂತ್‍ಕುಮಾರ್ ಎಂ.ಪಿ., ಧರಣೇಂದ್ರ ಪ್ರಸಾದ್ ಮತ್ತು ಮಂಜುನಾಥ್ ಮುತ್ತಿಗಿ ಇವರುಗಳು ಆಯ್ಕೆಯಾಗಿರುತ್ತಾರೆ.

ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಅಜಿತ್‍ಕುಮಾರ್ ಬೇತೂರು  ನೂತನ ಅಧ್ಯಕ್ಷ ಸುನಿಲ್‍ಕುಮಾರ್ ಡಿ. ಅವರಿಗೆ ಜೈನ ಧರ್ಮಧ್ವಜವನ್ನು ನೀಡುವುದರ ಮೂಲಕ ಅಧಿಕಾರ ಹಸ್ತಾಂತರಿಸಿ, ಶುಭ ಕೋರಿದರು. 

error: Content is protected !!