ಮೂಳೆ ವೈದ್ಯ ಮಹಾದೇವಯ್ಯನವರಿಂದ ಚಿಕಿತ್ಸೆ

ಮೂಳೆ ವೈದ್ಯ ಮಹಾದೇವಯ್ಯನವರಿಂದ ಚಿಕಿತ್ಸೆ

ದಾವಣಗೆರೆ, ಮಾ. 29- ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ವೈದ್ಯರಾದ ಶ್ರೀಮತಿ ಪುಷ್ಪಲತ ಅವರ ಮನೆಯಲ್ಲಿ ರಾಮನಗರ ಜಿಲ್ಲೆಯ ಕುದೂರಿನ ಮೂಳೆಯ ವೈದ್ಯ ಮಹದೇವಯ್ಯ ಅವರು ಮೂಳೆ ಮುರಿತ, ಲಿಗ್‌ಮೆಂಟ್ ಸಮಸ್ಯೆ, ಮೊಣಕಾಲು ನೋವು, ಭುಜದ ನೋವು ಮುಂತಾದ ಸಮಸ್ಯೆ ಇರುವವರಿಗೆ  ಜಿಲ್ಲಾ ಪಾರಂಪರಿಕ ವೈದ್ಯ ಪರಿಷತ್ ಅಡಿಯಲ್ಲಿ ಚಿಕಿತ್ಸೆ ನೀಡಿದರು.

ಈ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಪಾರಂಪರಿಕ ವೈದ್ಯ ರಾದ ಶ್ರೀಮತಿ ಕೆ.ಎಂ. ಪುಷ್ಪಲತ ಹಾಗೂ ಉಮೇಶ್ ವಹಿಸಿಕೊಂಡಿ ದ್ದರು. ಸಂಪರ್ಕಿಸಿ : 97438 95325, 98801 07918.

error: Content is protected !!