ಶ್ರೀ ಬಕ್ಕೇಶ್ವರ ಸ್ವಾಮಿ ನೂತನ ರಥ ಪೂಜೆ

ಶ್ರೀ ಬಕ್ಕೇಶ್ವರ ಸ್ವಾಮಿ ನೂತನ ರಥ ಪೂಜೆ

ಶ್ರೀ ಬಕ್ಕೇಶ್ವರ ಸ್ವಾಮಿ ನೂತನ ರಥ ಪೂಜೆ - Janathavani

ದಾವಣಗೆರೆ, ಮಾ.28- ನಗರದ ಚೌಕೀಪೇಟೆ ಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಸ್ವಾಮಿಯ ನೂತನ ರಥದ ಪೂಜಾ ಹಾಗೂ ಸಮರ್ಪಣಾ ಕಾರ್ಯಕ್ರಮದಲ್ಲಿ ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಅಥಣಿ ಎಸ್.ವೀರಣ್ಣ, ಮಾಗಾನಹಳ್ಳಿ ಶಿವಾನಂದಪ್ಪ, ವಿನಯ್ ಕುಮಾರ್, ಜಯಣ್ಣ, ಗುರು, ಬಾದಾಮಿ ರುದ್ರೇಶ್, ಆಲದಳ್ಳಿ ಸಿದ್ರಾಮಣ್ಣ ಮುಂತಾಗಿ ಸೇವಾ ಸಮಿತಿ, ರಥೋತ್ಸವ ಸಮಿತಿ ಸದಸ್ಯರುಗಳು, ದೇವರಮನಿ ಶಿವಕುಮಾರ್, ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ ಮತ್ತಿತರರು ಅಲ್ಲಿದ್ದರು. 

ಶಾಸಕ ಶಾಮನೂರು ಶಿವಶಂಕರಪ್ಪ, ಬಿ.ಸಿ. ಉಮಾಪತಿ ಮುಂತಾದವರು ಆಗ ಮಿಸಿ, ನೂತನ ರಥ ವೀಕ್ಷಿಸಿದರು. ವೇದಮೂರ್ತಿ ವಿಜಯಕುಮಾರ್ ಮುಂತಾದವರು ಹೋಮ – ಪೂಜಾದಿಗಳನ್ನು ನೆರವೇ ರಿಸಿದರೆ, ರಥಶಿಲ್ಪಿ ವೀರಾಚಾರ್ ಗೊಪ್ಪೇನಹಳ್ಳಿ ಸಹೋದರರು ಭಾಗವಹಿಸಿದ್ದರು. 

ಶ್ರೀ ಬಕ್ಕೇಶ್ವರ ಸ್ವಾಮಿ ಮಹಾರಥೋತ್ಸವವು ಏಪ್ರಿಲ್ 13 ರಂದು ನೆರವೇರಲಿದೆ.

error: Content is protected !!