ಮುಮುಕ್ಷು ಶ್ರೀ ಮಯಂಕ್ ಮಹಾವೀರ ಸಂಘವಿಯ ಜೈನ್ ಸಂತ ದೀಕ್ಷೆ

ಮುಮುಕ್ಷು ಶ್ರೀ ಮಯಂಕ್ ಮಹಾವೀರ ಸಂಘವಿಯ ಜೈನ್ ಸಂತ ದೀಕ್ಷೆ

ನಗರದಲ್ಲಿ ಇಂದಿನಿಂದ ನಾಲ್ಕು ದಿನ ಕಾರ್ಯಕ್ರಮ

ದಾವಣಗೆರೆ, ಮಾ.28- ಫರ್ನಿಚರ್ ತಯಾರಕರೂ, ಮಾರಾಟಗಾರರೂ, ವಕೀಲರೂ  ಆದ ಸಂಘವಿ ಮಹಾವೀರ ಜೈನ್ ಅವರ 17 ವರ್ಷದ ಪುತ್ರ ಮಯಂಕ್ ಅವರು ಬರುವ ಏಪ್ರಿಲ್ 1 ರ ಸೋಮವಾರ ಲೌಕಿಕ ಸುಖಮಯ ಬದುಕಿನಿಂದ ನಿರ್ಗಮಿಸಿ, ಕಠಿಣವಾದ ಜನ್ಮ ಜನ್ಮಾಂತರಗಳ ಹುಟ್ಟು – ಸಾವುಗಳ ಜಂಜಾಟಗಳಿಂದ ಮುಕ್ತಿ ಹೊಂದಬಹುದಾದಂತಹ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. 

ರೇಣುಕ ಮಂದಿರದಲ್ಲಿ ಜೈನ ಸಂತರು, ಆಚಾರ್ಯರ ಸಮ್ಮುಖದಲ್ಲಿ ನಡೆಯಲಿರುವ ಈ  ಕಾರ್ಯಕ್ರಮವು ಮಹೋತ್ಸವದ ರೂಪದಲ್ಲಿ ಪ್ರಾರಂಭವಾಗಲಿದ್ದು, ನಾಳೆ ದಿನಾಂಕ 29 ಮತ್ತು 30 ನೇ ದಿನಗಳಂದು ಇದೇ ಸಂಬಂಧವಾಗಿ ನಡೆಯಲಿರುವ ಹಲವಾರು ಧಾರ್ಮಿಕ ವಿಧಿವಿಧಾನಗಳ ನಂತರ  ದಿನಾಂಕ 31ರ ಭಾನುವಾರ ಸಾಂಸಾರಿಕ ಜೀವನದ ಎಲ್ಲಾ ಸುಖ ಸಂಪತ್ತುಗಳ ತ್ಯಾಗದ ಪ್ರತೀಕವಾಗಿ ಮುಮುಕ್ಷು ಮಯಂಕ್‌ನ ಸಾಂಸಾರಿಕ ಜೀವನದ ಕೊನೆಯ ಬೃಹತ್ ಮೆರವಣಿಗೆ ಜರುಗಲಿದೆ. ಚೌಕೀಪೇಟೆಯ ಶ್ರೀ ಸುಪಾರ್ಶ್ವನಾಥ ಜೈನ ದೇವಸ್ಥಾನದಿಂದ ಮುಂಜಾನೆ 8 ಗಂಟೆಗೆ ಹೊರಟು ರೇಣುಕ ಮಂದಿರ ತಲುಪಲಿದೆ. 

31 ರ ಭಾನುವಾರದ ಸಂಜೆ ಈ ದೀಕ್ಷಾರ್ಥಿ ಮಯಂಕ್ ಅವರಿಗೆ ಈ ಲೌಕಿಕ ಜೀವನದಿಂದ ಆಧ್ಯಾತ್ಮಿಕ ಜೀವನದ ಪ್ರಮುಖ ಘಟ್ಟ ಏರಲು ಬೀಳ್ಕೊಡುಗೆ ಸಮಾರಂಭ ಇರುತ್ತದೆ. 

ಈ ದೀಕ್ಷಾ ಸಮಾರಂಭದ ಅಂತಿಮ, ಅತೀ ಪ್ರಮುಖ ಮತ್ತು ಅಲೌಕಿಕ ಘಟ್ಟವಾದ ದೀಕ್ಷಾ ಪ್ರಧಾನ ಮತ್ತು ಸ್ವೀಕಾರ ಸಮಾರಂಭವು ಏಪ್ರಿಲ್ ದಿನಾಂಕ 1ನೇ ಸೋಮವಾರ ಬೆಳಿಗ್ಗೆ 8 ಗಂಟೆಗೆ ರೇಣುಕ ಮಂದಿರದಲ್ಲಿ ಪ್ರಾರಂಭವಾಗುವುದು.  

error: Content is protected !!