ಸಿಎನ್ಕೆ ಸ್ಮರಣಾರ್ಥ ಪುಸ್ತಕ ವಿತರಣೆ

ಸಿಎನ್ಕೆ ಸ್ಮರಣಾರ್ಥ ಪುಸ್ತಕ ವಿತರಣೆ

ದಾವಣಗೆರೆ, ಮಾ. 28- ಈಚೆಗೆ ನಿಧನರಾದ ಮಾಜಿ ಸಚಿವರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರ ಸ್ಮರಣೆಗಾಗಿ ಮೌಲಾನಾ ಆಜಾದ್ ಸಂಸ್ಥೆಯ ವತಿಯಿಂದ ನಗರದ ವಿರಕ್ತ ಮಠದ ಶ್ರೀ ಮುರುಘರಾಜೇಂದ್ರ ಶಾಲೆಯಲ್ಲಿ   ಶ್ರೀ ಬಸವಪ್ರಭು ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಇಂದು ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು. ನಾಗಮ್ಮ ಕೇಶವಮೂರ್ತಿಯವರ ಸಾಮಾಜಿಕ ಸೇವೆಯನ್ನು ಶ್ರೀ ಬಸವಪ್ರಭು ಸ್ವಾಮೀಜಿ ಸ್ಮರಿಸಿದರು. ಮೌಲಾನಾ ಆಜಾದ್ ಸಂಸ್ಥೆಯ ಅಧ್ಯಕ್ಷ   ಸಿ. ನಸೀರ್ ಅಹಮ್ಮದ್ ಅವರು ಮಕ್ಕಳಿಗೆ ಪೆನ್ನು, ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು. 

ಈ ಸಂದರ್ಭದಲ್ಲಿ ವರ್ತಕರುಗಳಾದ ಕೆ.ಜಾವೀದ್ ಸಾಬ್, ಕೆ.ಸಿ.ಮಹಮ್ಮದ್, ಡಿ.ರಶೀದ್, ರಾಜಾ, ರೋಷನ್ ಅಲಿ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!