ಭದ್ರಾ ನೀರು ಹರಿಸಲು ಭಾರತೀಯ ರೈತ ಒಕ್ಕೂಟ ಒತ್ತಾಯ

ಭದ್ರಾ ನೀರು ಹರಿಸಲು  ಭಾರತೀಯ ರೈತ ಒಕ್ಕೂಟ ಒತ್ತಾಯ

ದಾವಣಗೆರೆ, ಮಾ. 28- ಭದ್ರಾ ಅಚ್ಚುಕಟ್ಟು ಪ್ರದೇಶ ದಾವಣಗೆರೆ ವಿಭಾಗದ ಶಿರಮಗೊಂಡನಹಳ್ಳಿ, ನಾಗನೂರು, ಬೆಳವನೂರು, ಶಾಮನೂರು, ಬಿಸಲೇರಿ, ಜರೇಕಟ್ಟೆ, 10 ರ ವಲಯ ಹರಿಹರ ವಿಭಾಗಕ್ಕೆ ನೀರು ಬಿಡುಗಡೆಯಾಗಿ 8 ದಿನಗಳಾದರೂ ತೋಟಗಳಿಗೆ, ದನ-ಕರುಗಳಿಗೆ ನೀರು ಲಭ್ಯವಿಲ್ಲ.

ಕುರ್ಕಿ ಗ್ರಾಮದ ಹತ್ತಿರ ಕಲ್ಪನಹಳ್ಳಿ ಕಡೆಗೆ ಹೋಗುವ ಚಾನಲ್‌ಗೆ ಅಕ್ರಮವಾಗಿ ಗೇಟ್ ಎತ್ತಿ ನೀರು ಬಿಡುವುದರಿಂದ ನಮಗೆ ನೀರು ತಲುಪುವುದಿಲ್ಲ. ಇನ್ನು ಕೇವಲ 4 ದಿನಗಳು ಮಾತ್ರ ನೀರು ಹರಿಯಲಿದ್ದು, ಕೂಡಲೇ ಸೂಕ್ತ ಕ್ರಮ ಜರುಗಿಸಿ ನಮ್ಮ ಭಾಗಕ್ಕೆ ನೀರು ಹರಿಸುವಂತೆ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್ ಮತ್ತಿತರರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. 

error: Content is protected !!