ಭಾವಸಾರ ವಿಷನ್ ಇಂಡಿಯಾದಿಂದ ನಾಗರತ್ನಗೆ ಸನ್ಮಾನ

ಭಾವಸಾರ ವಿಷನ್ ಇಂಡಿಯಾದಿಂದ ನಾಗರತ್ನಗೆ ಸನ್ಮಾನ

ದಾವಣಗೆರೆ, ಮಾ. 25- ಭಾವಸಾರ ವಿಷನ್ ಇಂಡಿಯಾ (ದಾವಣಗೆರೆ) ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಅವಾರ್ಡ್ ಪಡೆದುಕೊಂಡಿರುವ ಹೊನ್ನಾಳಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೆಲ್ತ್‌ಕೇರ್ ಆಫೀಸರ್ ಶ್ರೀಮತಿ ಟಿ. ನಾಗರತ್ನ ಅವರನ್ನು ಸನ್ಮಾನಿಸಲಾಯಿತು. ನಾಗರತ್ನ, ಕರ್ನಾಟಕದಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ನರ್ಸ್ ಆಗಿದ್ದಾರೆ.

ಕಾರ್ಯಕ್ರಮದಲ್ಲಿ ಬಿ. ವಿ. ಐ. ಅಧ್ಯಕ್ಷರಾದ ಶ್ರೀಮತಿ ಸರಳ ಅಮಟೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!