ಕೆ.ಎನ್.ಹಳ್ಳಿಯಲ್ಲಿ ಯೋಗಿ ನಾರೇಯಣರ ಜಯಂತ್ಯೋತ್ಸವ

ಕೆ.ಎನ್.ಹಳ್ಳಿಯಲ್ಲಿ ಯೋಗಿ ನಾರೇಯಣರ ಜಯಂತ್ಯೋತ್ಸವ

ಮಲೇಬೆನ್ನೂರು, ಮಾ.25- ಕಡಾರನಾಯ್ಕನಹಳ್ಳಿ ಗ್ರಾಮದಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತ್ಯೋತ್ಸವವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ದೇವಸ್ಥಾನದಲ್ಲಿ ಯತೀಂದ್ರರ ಮೂರ್ತಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರರ ಭಾವಚಿತ್ರದ ಮೆರವಣಿಗೆ ಯನ್ನು ಪೂರ್ಣ ಕುಂಭ ಮೇಳದೊಂದಿಗೆ ನಡೆಸಲಾಯಿತು.

ದೇವಸ್ಥಾನ ಕಮಿಟಿ ಅಧ್ಯಕ್ಷ ಜಿ.ಮಂಜುನಾಥ್, ಕಾರ್ಯದರ್ಶಿ ತಿಪ್ಪೇಶ್ ಚಕ್ಕಡಿ, ಉಪಾಧ್ಯಕ್ಷರಾದ ಜಿ.ದೇವರಾಜ್, ಗುಂಡೇರಿ ಮಹಾದೇವ, ಬ್ಯಾಡಗಿ ನಾರಾ ಯಣಪ್ಪ, ವಿ.ರುದ್ರಪ್ಪ, ರಾಜಶೇಖರ್ ಬ್ಯಾಡಗಿ, ಗೌರವಾ ಧ್ಯಕ್ಷ ಹನುಮಂತಪ್ಪ, ಗುಂಡೇರಿ, ಮಂಜಪ್ಪ ನಿಬಗೂರು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!