ಮಲೇಬೆನ್ನೂರು, ಮಾ.25- ಜಿಗಳಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ರಥೋ ತ್ಸವದ ಅಂಗವಾಗಿ ಸೋಮವಾರ ಸಂಜೆ ಶ್ರೀ ರಂಗನಾಥ ಸ್ವಾಮಿ, ಬೀರಲಿಂಗೇಶ್ವರ ಮತ್ತು ಜಿ.ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಸಮ್ಮುಖದಲ್ಲಿ ಜರುಗಿದ ಭೂತನ ಸೇವೆ ಗಮನ ಸೆಳೆಯಿತು. ಹೊಸದಾಗಿ ಮುದ್ರೆ ಹಾಕಿಸಿದ ದಾಸಪ್ಪರು ಸೇರಿದಂತೆ ಗ್ರಾಮದ ಬಹುತೇಕ ದಾಸಪ್ಪರು ಈ ಭೂತನ ಸೇವೆಯಲ್ಲಿ ಪಾಲ್ಗೊಂಡು ಪದ್ಧತಿಯಂತೆ ಪ್ರಸಾದ ಸ್ವೀಕರಿಸಿದರು. ನಂತರ ಗ್ರಾಮದ ರಾಜಬೀದಿಯಲ್ಲಿ ದೇವರುಗಳ ಉತ್ಸವ ಸಂಭ್ರಮದಿಂದ ನಡೆಯಿತು. ನಾಳೆ ಮಂಗಳವಾರ ಶ್ರೀ ಚೌಡೇಶ್ವರಿ ದೇವಿಯ ಹಬ್ಬ ಜರುಗಲಿದೆ.
July 4, 2024