ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವವು ಇಂದು ಜರುಗಲಿದೆ. ರಥೋತ್ಸವದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಜ ಉತ್ಸವ, ಸಂಜೆ 4 ಗಂಟೆಯಿಂದ ಶಸ್ತ್ರ ಸೇವೆ ಸೇರಿದಂತೆ ಇತರೆ ಸೇವಾ ಕಾರ್ಯಕ್ರಮಗಳ ನಡೆಯಲಿದ್ದು, ಇದೇ ದಿನ ತಡರಾತ್ರಿ (ಭಾನುವಾರ ಬೆಳಗಿನ ಜಾವ) ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಶ್ರೀ ಬೀರಲಿಂಗೇಶ್ವರ ಮತ್ತು ಜಿ.ಬೇವಿನಹಳ್ಳಿ ಹಾಗೂ ಯಲವಟ್ಟಿ ಗ್ರಾಮಗಳ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಜೊತೆಗೂಡಿ ಜರುಗಲಿದೆ. ನಾಳೆ ಭಾನುವಾರ ಬೆಳಗ್ಗೆ 10.30 ರಿಂದ ದೇವಸ್ಥಾನದಲ್ಲಿ ಜವಳ, ಮುದ್ರೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ಓಕುಳಿ ನಂತರ ಕಂಕಣ ವಿಸರ್ಜನೆ ನಡೆಯಲಿದೆ.
ಜಿಗಳಿಯಲ್ಲಿಂದು ರಂಗನಾಥ ಸ್ವಾಮಿ ತೇರು
![05 jigali ranganatha 23.03.2024 ಜಿಗಳಿಯಲ್ಲಿಂದು ರಂಗನಾಥ ಸ್ವಾಮಿ ತೇರು](https://janathavani.com/wp-content/uploads/2024/03/05-jigali-ranganatha-23.03.2024.jpg)