ಜಾತ್ರೆ : ಎಸ್‌ಎಸ್‌ಕೆ ತರುಣ ಮಂಡಳಿಯಿಂದ ಮಜ್ಜಿಗೆ

ಜಾತ್ರೆ : ಎಸ್‌ಎಸ್‌ಕೆ ತರುಣ ಮಂಡಳಿಯಿಂದ ಮಜ್ಜಿಗೆ

ದಾವಣಗೆರೆ, ಮಾ. 20- ಎಸ್‌ಎಸ್‌ಕೆ ತರುಣ ಮಂಡಳಿ ವತಿಯಿಂದ  ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾಂಬಿಕ ದೇವಿ ದರ್ಶನಕ್ಕೆ ಆಗಮಿಸುವ ಸಮಸ್ತ ಭಕ್ತಾದಿಗಳಿಗೆ ಮಜ್ಜಿಗೆ ವಿತರಣಾ ಕಾರ್ಯಕ್ರಮವು ದೊಡ್ಡಪೇಟೆಯ ಶ್ರೀ ಮಾರುತಿ ಜ್ಯುವೆಲರ್ಸ್ ಆವರಣದಲ್ಲಿ ನಡೆಯಿತು. ಸಮಾಜದ ಉಪಾಧ್ಯಕ್ಷ ರಾಜು ಎಲ್. ಬದ್ದಿ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಹೇಶ್ ಸೋಳಂಕಿ, ಖಜಾಂಚಿ  ಮಂಜುನಾಥಸಾ ಹಬೀಬ, ಅಂಬಾಭವಾನಿ ಬ್ಯಾಂಕ್   ಉಪಾಧ್ಯಕ್ಷ ಗಿರಿಧರ್ ಮೆಹರವಾಡೆ, ಸಹ ಕಾರ್ಯದರ್ಶಿ  ಕೋಟಿ ಕಿರಣ್ ಲದ್ವಾ, ಓಂಪ್ರಕಾಶ ಮೆಹರವಾಡೆ, ತರುಣ ಮಂಡಳಿ ಅಧ್ಯಕ್ಷ ಪ್ರವೀಣ್ ಜಿ. ಕಾಟ್ವೆ, ಉಪಾಧ್ಯಕ್ಷ ಭರತ್ ಕಿಶನ್ ಲದ್ವಾ, ಕ್ರೀಡಾ ಕಾರ್ಯದರ್ಶಿ ಪ್ರದೀಪ್ ಬದ್ಧಿ, ಸಹ ಕಾರ್ಯದರ್ಶಿ ಪ್ರಶಾಂತ ರಂಗರೇಜ್, ಸದಸ್ಯ ಕಿರಣ್ ಮೆಹರ್ವಾಡೆ,  ಮಿಲನ್ ಸೋಳಂಕಿ ಉಪಸ್ಥಿತರಿದ್ದರು.

error: Content is protected !!