ಚರುಗಕ್ಕೆ ಕುಂಬಾರ ಸಮಾಜದ ಮಡಿಕೆ

ಚರುಗಕ್ಕೆ ಕುಂಬಾರ ಸಮಾಜದ ಮಡಿಕೆ

ದಾವಣಗೆರೆ, ಮಾ.19-  ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಾಬುದಾರರಾದ  ನಗರದ ಕುಂಬಾರ ಸಮಾಜದವರು ಇಂದು ಅಮ್ಮನಿಗೆ ಮಡಿಕೆಗಳನ್ನು ಸಮರ್ಪಿಸಿದರು.

ಭಾರತ್ ಕಾಲೋನಿಯಿಂದ ವಾಹನದಲ್ಲಿ ಮಡಿಕೆಗಳನ್ನು ತುಂಬಿಕೊಂಡು  ಮಧ್ಯಾಹ್ನ ಮೆರವಣಿಗೆ ಮೂಲಕ ಆಗಮಿಸಿ, ಮೊದಲು ಕಾಳಮ್ಮ ದೇವಸ್ಥಾನಕ್ಕೆ ಬಂದು ನಂತರ ರಾತ್ರಿ ಮಡಕೆಗಳನ್ನು ದುಗ್ಗಮ್ಮ ದೇವಸ್ಥಾನಕ್ಕೆ ಒಯ್ಯಲಾಯಿತು.ನಾಳೆ ಬುಧವಾರ ಬೆಳಗಿನ ಜಾವ ಜರುಗುವ ಚರುಗಕ್ಕೆ ಜೋಳದ ಕಾಳುಗಳನ್ನು ಬೇಯಿಸಲು ಈ ಮಡಿಕೆಗಳನ್ನು ಬಳಸಲಾಗುತ್ತದೆ.

ಮೆರವಣಿಗೆಯಲ್ಲಿ ಕಾರ್ಯದರ್ಶಿ ಇ.ತಿಪ್ಪೇಸ್ವಾಮಿ, ಕೆ.ಎಚ್.ಸದಾಶಿವಪ್ಪ, ಕೆ.ಸಿ.ಲೋಕೇಶ್, ಡಿ.ಎಸ್.ತಿಪ್ಪೇಸ್ವಾಮಿ, ಕೆ.ಪಿ. ತಿಪ್ಪೇಸ್ವಾಮಿ, ಕೆ.ಮುತ್ತಪ್ಪ, ಕೆ.ಮುರಿಗೆಪ್ಪ, ಟಿ.ಗಣೇಶಪ್ಪ, ಕೆ.ಎಂ.ಬಸವರಾಜ್, ಟಿ.ಅಜ್ಜಣ್ಣ, ಕೆ.ಪರಮೇಶ್ವರಪ್ಪ, ಬಿ. ಶಿವಕುಮಾರ್, ಕೆ.ಎಸ್.ನಂದೀಶ್, ಕೆ.ಪಿ.ರುದ್ರೇಶ್ ಮೂರ್ತಿ, ಕೆ.ಬಿ.ಅಜ್ಜಪ್ಪ, ಕೋಗುಂಡಿ ಶರಣಪ್ಪ ಸೇರಿದಂತೆ ಸಮಾಜದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.

error: Content is protected !!