ಸಿಎನ್ಕೆಗೆ ಶ್ರದ್ಧಾಂಜಲಿ

ದಾವಣಗೆರೆ, ಮಾ.19- ನಗರದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ  ವತಿಯಿಂದ ಧ.ರಾ.ಮ ಸ್ಕೌಟ್ ಭವನದಲ್ಲಿ ಸಭೆ ಸೇರಿ ಮಾಜಿ ಸಚಿವರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.   

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ  ಮುರುಘರಾಜೇಂದ್ರ ಜೆ. ಚಿಗಟೇರಿ ಮಾತನಾಡಿ,   ನಾಗಮ್ಮ ಕೇಶವಮೂರ್ತಿಯವರು   ಜಿಲ್ಲಾ ಗೈಡ್ ಆಯುಕ್ತರಾಗಿ,  ರಾಜ್ಯ ಸಂಸ್ಥೆ  ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದನ್ನು  ಸ್ಮರಿಸಿದರು.  

ಸಂತಾಪ ಸೂಚಕ ಸಭೆಯಲ್ಲಿ ಸ್ಕೌಟ್ ಆಯುಕ್ತ  ಎ. ಪಿ. ಷಡಕ್ಷರಪ್ಪ, ಸಹಾಯಕ ಜಿಲ್ಲಾ ಆಯುಕ್ತ ಎನ್. ಕೆ. ಕೊಟ್ರೇಶ್,  ತರಬೇತಿ ಆಯುಕ್ತ ಡಿ. ಹಾಲಪ್ಪ, ಜಿಲ್ಲಾ ಕಾರ್ಯದರ್ಶಿ ಎಂ. ರತ್ನಮ್ಮ, ಜಂಟಿ ಕಾರ್ಯದರ್ಶಿ ಸಖವಾಣಿ  ಸಂಯೋಜನಾ ಅಧಿಕಾರಿ ಅಶ್ವಿನಿ, ರೋವರ್ಸ್ ಮತ್ತು ರೇಂಜರ್ಸ್ ಪಾಲ್ಗೊಂಡಿದ್ದರು

error: Content is protected !!