ಚನ್ನಗಿರಿ ತಾಲ್ಲೂಕಿನ ಹೊಸಳ್ಳಿಯಲ್ಲಿ ಇಂದು ಬೆಳಿಗ್ಗೆ 10.24ಕ್ಕೆ ವ್ಯಾಸಾಂಜನೇಯ ದೇವಸ್ಥಾನದ ಕಾರ್ಯಸಿದ್ಧಿ ಹನುಮಾನ್, ಗಣಪತಿ, ನವಗ್ರಹ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.
ಮುಂಜಾನೆ 5ಕ್ಕೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಪಂಚಗವ್ಯಪ್ರಾಶನ, ಪೀಠಾನ್ಯಾಸ, ರತ್ನಾನ್ಯಾಸ, 10.24ಕ್ಕೆ ವಿಗ್ರಹ ಸ್ಥಿರ ಪ್ರತಿಷ್ಠಾಪನೆ, ಕಳಸಾರೋಹಣ, ಜೀವಕಳಾನ್ಯಾಸ, ಶಾಂತಿಹೋಮ ಮತ್ತು ಮಹಾಪೂರ್ಣಾಹುತಿ ನಡೆಯಲಿದೆ.ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.