ರಾಣೇಬೆನ್ನೂರು,ಮಾ.18- ಹಾವೇರಿ ಜಿಲ್ಲಾ ಜಾತ್ಯತೀತ ಜನತಾದಳದ ವಿವಿಧ ವಿಭಾಗಗಳ ಅಧ್ಯಕ್ಷರು ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡ ಶಿವಣ್ಣನವರ ತಿಳಿಸಿದ್ದಾರೆ.
ಅಲ್ತಾಫ್ ನದಾಫ್ ಹಾವೇರಿ ಯುವ ಜನತಾದಳ, ಸಿದ್ದಪ್ಪ ಗುಡಿಮುಂದಲರ ನಿಟ್ಟೂರ ಪರಿಶಿಷ್ಟ ಜಾತಿ ವಿಭಾಗ, ಮಂಜುನಾಥ ಕನ್ನನಾಯ್ಕನವರ ದೇವಗಿರಿ ಪರಿಶಿಷ್ಟ ಪಂಗಡ ವಿಭಾಗ, ವಿಠಲ್ ಸುಣಗಾರ ರಾಣೇಬೆನ್ನೂರು ಹಿಂದುಳಿದ ವರ್ಗ, ಮೌನೇಶ ಮನುವಾಚಾರಿ ರಾಣೇಬೆನ್ನೂರು ಕಾರ್ಮಿಕ ವಿಭಾಗ, ಕತಾಲ್ ಸಾಬ್ ಬಣಗಾರ ಸವಣೂರ ಅಲ್ಪಸಂಖ್ಯಾತ ವಿಭಾಗ, ರಾಜಣ್ಣ ಮಾಳೋದೆ ಶಿಗ್ಗಾಂವಿ ಪದವೀಧರ ವಿಭಾಗ, ಡಾ.ಹನುಮಂತಪ್ಪ ಹತ್ತಿ ದೇವಿಹೊಸೂರು ವೈದ್ಯಕೀಯ ವಿಭಾಗ, ಗೌಸ್ ಮೊಹದ್ದೀನ್ ಆಲದಕಟ್ಟಿ ಅಕ್ಕಿಆಲೂರ ವಿಶೇಷ ಚೇತನ ವಿಭಾಗ, ಮಲ್ಲಿಕಾರ್ಜುನ ತೆಗ್ಗಿನ ಚಳಗೇರಿ ರೈತ ವಿಭಾಗ ಹಾಗೂ ರೀಟಾ ನಾಯ್ಕರ ಅಲ್ಪಸಂಖ್ಯಾತ ಕ್ರೈಸ್ತ ವಿಭಾಗದ ಅಧ್ಯಕ್ಷರುಗಳು.