ಎಸ್.ಎಸ್. ಕೇರ್ ಟ್ರಸ್ಟ್‍ನಿಂದ ಜನತೆಗೆ ಟ್ಯಾಂಕರ್‍ನಲ್ಲಿ ಉಚಿತ ನೀರು ಪೂರೈಕೆ

ಎಸ್.ಎಸ್. ಕೇರ್ ಟ್ರಸ್ಟ್‍ನಿಂದ ಜನತೆಗೆ ಟ್ಯಾಂಕರ್‍ನಲ್ಲಿ ಉಚಿತ ನೀರು ಪೂರೈಕೆ

ದಾವಣಗೆರೆ,ಮಾ.18- ನಗರ ದೇವತೆ ಶ್ರೀ ದುರ್ಗಾಂಬಿಕಾ  ದೇವಿ ಜಾತ್ರೆ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಎಸ್.ಎಸ್.ಕೇರ್ ಟ್ರಸ್ಟ್‍ನಿಂದ ಜನತೆಗೆ ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಕೆ ಮಾಡಲಾಗುವುದು ಎಂದು ಟ್ರಸ್ಟ್‍ನ ಮುಖ್ಯಸ್ಥರೂ, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಇಂದಿನಿಂದ ಬೆಳಿಗ್ಗೆ 10 ರಿಂದ ಸಂಜೆ 6 ರೊಳಗೆ ಈ ಕೆಳಗೆ ಕೊಟ್ಟಿರುವ ನಂಬರ್‍ಗಳಿಗೆ ಫೋನ್ ಮಾಡಿದಲ್ಲಿ ತಮ್ಮ ಮನೆಯ ಬಾಗಿಲಿಗೆ ನೀರು ಸರಬರಾಜು ಮಾಡಲಾಗುವುದು. ಒಟ್ಟಾರೆ ಆರು ಟ್ಯಾಂಕರ್‍ಗಳನ್ನು ನೀರು ಪೂರೈ ಕೆಗೆ ನೀಡಲಾಗಿದ್ದು, ನಾಗರಿಕರು ಯಾರಿಗೂ ಹಣ ನೀಡದೆ ಈ ಸೌಲಭ್ಯ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಾಗರಿಕರಿಗೆ ಅನೇಕ ಸವಲತ್ತುಗಳನ್ನು ನೀಡಿರುವ ಎಸ್.ಎಸ್.ಕೇರ್ ಟ್ರಸ್ಟ್ ಈ ಉಚಿತ ನೀರು ಪೂರೈಸುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಶಿವಶಂಕರಪ್ಪ ಅವರು ತಿಳಿಸಿದ್ದಾರೆ. ನೀರಿನ ಟ್ಯಾಂಕರ್‌ಗಾಗಿ ಸಂಪರ್ಕಿಸುವ ನಂಬರ್‌ಗಳು: 08192-222014, 80504 10555.

error: Content is protected !!