ಹೊಸಪಾಳ್ಯ : ಇಂದು ಕೆರೆ ಹಸ್ತಾಂತರ

ಮಲೇಬೆನ್ನೂರು ಸಮೀಪದ ಹೊಸಪಾಳ್ಯ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ `ನಮ್ಮೂರು ನಮ್ಮ ಕೆರೆ’ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳಿಸಿರುವ ಕರಿಯಮ್ಮ ದೇವಿ ಕೆರೆ ಹಸ್ತಾಂತರ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಲೇಬೆನ್ನೂರು ಯೋಜನಾಧಿ ಕಾರಿ ವಸಂತ್ ದೇವಾಡಿಗ, ಕೃಷಿ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ.

ಸಾನ್ನಿಧ್ಯ : ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್, ಉದ್ಘಾಟನೆ : ಮಂಜುಳಾ ಶೇಖರಪ್ಪ, ಅಧ್ಯಕ್ಷತೆ : ಗದಿಗೆಪ್ಪ, ನಾಮಫಲಕ ಅನಾವರಣ : ಶ್ರೀಮತಿ ಗೀತಾ, ಕೆರೆ ಹಸ್ತಾಂತರ : ಎಂ.ಲಕ್ಷ್ಮಣ, ಮುಖ್ಯ ಅತಿಥಿಗಳು : ಎನ್.ಜಿ.ನಾಗನಗೌಡ್ರು, ಬಿ.ಹೆಚ್.ಈರಪ್ಪ, ಬಿ.ದಾನಪ್ಪ, ಹೆಚ್.ಪಿ.ನಾಗೇಂದ್ರ.

error: Content is protected !!