ಜಿ.ಎಂ.ವಿಶ್ವವಿದ್ಯಾಲಯದ ವತಿಯಿಂದ ನೀರು ಉಳಿಸಿ, ಜೀವ ಉಳಿಸಿ ಬೈಕ್ ರ‍್ಯಾಲಿ

ಜಿ.ಎಂ.ವಿಶ್ವವಿದ್ಯಾಲಯದ ವತಿಯಿಂದ ನೀರು ಉಳಿಸಿ, ಜೀವ ಉಳಿಸಿ ಬೈಕ್ ರ‍್ಯಾಲಿ

ದಾವಣಗೆರೆ, ಮಾ. 15 – ನೀರು ಉಳಿಸಿ, ಜೀವ ಉಳಿಸಿ, ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ಜಿಎಂಐಟಿ  ಮತ್ತು  ಜಿ.ಎಂ. ವಿಶ್ವವಿದ್ಯಾಲಯ  ನೇತೃತ್ವದಲ್ಲಿ   ದಾವಣಗೆರೆ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ  ಬೈಕ್ ರ‍್ಯಾಲಿ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಜಿ.ಎಂ.  ವಿಶ್ವವಿದ್ಯಾಲಯದ  ಕುಲಪತಿ  ಡಾ. ಶಂಕಪಾಲ ಚಾಲನೆ ನೀಡಿದರು. ನಂತರ ಮಾತನಾಡಿ ನೀರನ್ನು ಉಳಿಸಿ ಜೀವ ಉಳಿಸಿ ಎಂಬುದು ನೀರಿನ ಸಂರಕ್ಷಣೆ ಮತ್ತು ಮಾನವನ ಉಳಿವಿನ ನಡುವಿನ ಪ್ರಮುಖ ಸಂಬಂಧವನ್ನು ನಮಗೆ ನೆನಪಿಸುವ ಪ್ರಬಲ ಸಂದೇಶವಾಗಿದೆ. ನೀರನ್ನು ಬುದ್ಧಿವಂತಿಕೆಯಿಂದ ಮತ್ತು ಜವಾಬ್ದಾರಿಯತವಾಗಿ ಬಳಸುವ ಮೂಲಕ ನೀರನ್ನು ಪೋಲು ಮಾಡಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ಪಾಂಡೆ ಎಂ.ಬಿ. ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ವಿವಿಧ ವಿಭಾಗಗಳ ಅಧ್ಯಾ ಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!