ದಾವಣಗೆರೆ ಅರ್ಬನ್‌ ಬ್ಯಾಂಕಿಗೆ ಕಣವಿ, ಮುಂಡಾಸ್‌ ನೇಮಕ

ದಾವಣಗೆರೆ ಅರ್ಬನ್‌  ಬ್ಯಾಂಕಿಗೆ ಕಣವಿ,  ಮುಂಡಾಸ್‌ ನೇಮಕ

ದಾವಣಗೆರೆ, ಮಾ. 13- ದಾವಣಗೆರೆ ಅರ್ಬನ್ ಕೋ-ಆಪ ರೇಟಿವ್ ಬ್ಯಾಂಕ್ ಆಡಳಿತ ಮಂಡ ಳಿಯ ವೃತ್ತಿಪರ ನಿರ್ದೇಶಕರು ಗಳಾಗಿ ಹಿರಿಯ ಲೆಕ್ಕ ಪರಿಶೋಧಕ ಮುಂ ಡಾಸ್ ವೀರೇಂದ್ರಕುಮಾರ್ ಮತ್ತು ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಕಣವಿ ನೇಮಕಗೊಂಡಿದ್ದಾರೆ.

ಬ್ಯಾಂಕಿನ ಅಧ್ಯಕ್ಷ ಬಿ.ಸಿ. ಉಮಾಪತಿ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ  ನೇಮಕ ಮಾಡಲಾಯಿತು. ಕಳೆದ ಅವಧಿಯಲ್ಲಿ ವೃತ್ತಿಪರ ನಿರ್ದೇಶಕರುಗಳಾಗಿದ್ದ ಮಲ್ಲಿಕಾರ್ಜುನ ಕಣವಿ ಮತ್ತು ಮುಂಡಾಸ್ ವೀರೇಂದ್ರಕುಮಾರ್ ಅವರುಗಳ ಬ್ಯಾಂಕಿಂಗ್ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಮತ್ತೊಂದು ಅವಧಿಗೆ ವೃತ್ತಿಪರ ನಿರ್ದೇಶಕರುಗಳನ್ನಾಗಿ ನೇಮಕ ಮಾಡಿಕೊಳ್ಳಲು ಸಭೆಯು ಒಮ್ಮತದಿಂದ ತೀರ್ಮಾನಿಸಿತು.

ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್, ನಿರ್ದೇಶಕರುಗಳಾದ ಕೋಗುಂಡಿ ಬಕ್ಕೇಶಪ್ಪ, ಅಂದನೂರು ಮುಪ್ಪಣ್ಣ, ದೇವರಮನೆ ಶಿವಕುಮಾರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಪಲ್ಲಾಗಟ್ಟೆ  ಶಿವಾನಂದಪ್ಪ, ಎಂ. ಚಂದ್ರಶೇಖರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಶ್ರೀಮತಿ ಅರ್ಚನಾ ಡಾ. ರುದ್ರಮುನಿ, ಇ.ಎಂ. ಮಂಜುನಾಥ, ಕಂಚಿಕೇರಿ ಮಹೇಶ್, ವಿ. ವಿಕ್ರಂ,  ಹೆಚ್.ಎಂ. ರುದ್ರಮುನಿಸ್ವಾಮಿ, ಸೋಗಿ ಮುರುಗೇಶ್ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!