ಮಲೇಬೆನ್ನೂರು ಸಮೀಪದ ನಂದಿತಾವರೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವವು ಇಂದು ತಡರಾತ್ರಿ ಜರುಗಲಿದೆ. ರಥೋತ್ಸವದ ಇಂದು ಬೆಳಿಗ್ಗೆ 5 ರಿಂದ 7 ರವರೆಗೆ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ನಡೆಯಲಿದ್ದು, ಬೆಳಿಗ್ಗೆ 9.30 ರಿಂದ ಸುರಿಗಿ ನೀರು, ನಂತರ ಜಿಗಳಿ ಗ್ರಾಮದ ಗೌಡ್ರ ವಂಶಸ್ಥರು ಹಾಗೂ ಗ್ರಾಮಸ್ಥರಿಂದ ಬಾಸಿಂಗ ಧಾರಣೆ ಮಾಡಲಾಗುವುದು. ಬೆಳಿಗ್ಗೆ 10.30 ರಿಂದ ಕಿವಿ ಚುಚ್ಚುವುದು, ಶಸ್ತ್ರ, ಹರಕೆ ಒಪ್ಪಿಸುವ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10.30ಕ್ಕೆ ಎಕ್ಕೆ ಗೊಂದಿಯಿಂದ ಬಸವೇಶ್ವರ ದೇವರನ್ನು ಮೆರವಣಿಗೆ ಮೂಲಕ ಸ್ಥಾಪಿಸಲಾ ಗುವುದು. ರಾತ್ರಿ 12 ಗಂಟೆ ನಂತರ ಶ್ರೀ ಬಸವೇಶ್ವರ ಸ್ವಾಮಿಯ ಮಹಾರಥೋತ್ಸವ ಜರುಗಲಿದೆ. ಗುರುವಾರ ಓಕುಳಿ ನಂತರ ಕಂಕಣ ವಿಸರ್ಜನೆ ನಡೆಯಲಿದೆ.
ನಂದಿತಾವರೆ : ಇಂದು ಬಸವಣ್ಣನ ತೇರು
![13 nanditavari news 13.03.2024 ನಂದಿತಾವರೆ : ಇಂದು ಬಸವಣ್ಣನ ತೇರು](https://janathavani.com/wp-content/uploads/2024/03/13-nanditavari-news-13.03.2024.jpg)