ಆಂಧ್ರಪ್ರದೇಶ ರಾಯಚೋಟಿಯಲ್ಲಿ ಇಂದು ಶ್ರೀ ವೀರಭದ್ರಸ್ವಾಮಿಯ ರಥೋತ್ಸವ

ಆಂಧ್ರಪ್ರದೇಶ ಅನ್ನಮಯ್ಯ ಜಿಲ್ಲೆ ರಾಯಚೋಟಿ ಕ್ಷೇತ್ರಾಧಿಪತಿ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಯ ರಥೋತ್ಸವವು ಇಂದು ಮಂಗಳವಾರ ಸಂಜೆ 4.30 ಕ್ಕೆ ನಡೆಯಲಿದೆ. ಬೆಳಿಗ್ಗೆ 4 ಗಂಟೆಗೆ ಅಗ್ನಿಕುಂಡ ಪ್ರವೇಶ, ಮುಂಜಾನೆ 11.45ಕ್ಕೆ ವಜ್ರದ ತ್ರಿನೇತ್ರ ಧಾರಣೆ ಹಾಗೂ ಮಹಾನೈವೇದ್ಯ, ನಂತರ ಸಂಜೆ 4ಕ್ಕೆ ಶ್ರೀ ಭದ್ರಾಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಉತ್ಸವ ಮೂರ್ತಿಗಳೊಂದಿಗೆ ರಥೋತ್ಸವವು ಜರುಗುವುದು.

error: Content is protected !!