ಹೊನ್ನಾಳಿ, ಮಾ.10- ಏಳನೇ ತಾಲ್ಲೂಕು ಮಟ್ಟದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಬಿ. ಧನಂಜಯ ಆಯ್ಕೆಯಾಗಿದ್ದಾರೆ.
ಕಳೆದ 33 ವರ್ಷಗಳಿಂದ ಸಮಾಜಶಾಸ್ತ್ರ ಉಪನ್ಯಾಸಕ, ವಿಭಾಗದ ಮುಖ್ಯಸ್ಥ, ಪ್ರಾಚಾರ್ಯ, ಕುವೆಂಪು ವಿವಿಯ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಪದವಿ ವಿದ್ಯಾರ್ಥಿಗಳಿಗಾಗಿ ಮೂರು ಪಠ್ಯಪುಸ್ತಕ ರಚಿಸಿ, ಸುಮಾರು ಆರು ಗ್ರಂಥಗಳಿಗೆ ಸಂಪಾದಕರಾಗಿ ಮತ್ತು ಸುಮಾರು 26ಕ್ಕೂ ಅಧಿಕ ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ರೈತ ಚಳುವಳಿ ಕುರಿತು 1991 ರಿಂದ 1998ರ ವರೆಗೆ ಸಂಶೋಧನೆ ಮಾಡಿ, ಎಂ.ಫಿಲ್. ಮತ್ತು ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.