ದಾವಣಗೆರೆ, ಮಾ.10- ಶಿವಕುಮಾರಸ್ವಾಮಿ ಬಡಾವಣೆಯ ಶ್ರೀ ವೀರಾಂಜನೇಯ ಮಹಾಸ್ವಾಮಿ ಸಾರ್ವಜನಿಕ ಧ್ಯಾನ ಮಂದಿರದಲ್ಲಿ ಮಹಾಶಿವರಾತ್ರಿಯ ಪೂಜೆ ಮತ್ತು ಜಾಗರಣೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಶ್ರೀ ಬಸವರಾಜ ಗುರೂಜಿ ಅವರು ಶಿವಕುಮಾರಸ್ವಾಮಿ ಬಡಾವಣೆಯ ಈಶ್ವರ ಗಣಪತಿ ದೇವಾಲಯ, ವಿದ್ಯಾನಗರ ಶ್ರೀ ಶಿವಪಾರ್ವತಿ ದೇವಾಲಯ ಸೇರಿದಂತೆ ನಗರದ ವಿವಿಧ ದೇವಸ್ಥಾನಗಳ ದರ್ಶನ ಪಡೆದು, ಹಿಮಾಲಯದ ಗಂಗಾ ಜಲ ಪ್ರೋಕ್ಷಿಸಿ ಪೂಜಾ, ಮಹಾಮಂಗಳಾರತಿಯನ್ನು ಮಾಡಿದರು. ಎಸ್. ವೀರೇಶ್, ಪ್ರಿಯಾಂಕ ವೀರೇಶ್, ಕೆ.ಆರ್. ರಿತೇಶ್, ಆರ್. ಮುಕ್ತಾ, ಆರ್.ಎಚ್. ಲತಾಕುಮಾರಿ, ಮಹಾದೇವಮ್ಮ ಮಲ್ಲಿಕಾ ರ್ಜುನಪ್ಪ, ಉಮೇಶ್ ಬಿ. ಪ್ಲಂಬರ್, ಸೇರಿದಂತೆ ಇತರರಿದ್ದರು.
July 23, 2024