ಚಿತ್ರಸಂತೆಯಲ್ಲಿ ಭಾಗವಹಿಸಿದ ಕಲಾವಿದರ ಫಲಿತಾಂಶ

ದಾವಣಗೆರೆ, ಮಾ.10- ನಗರದ ಎವಿಕೆ ರಸ್ತೆಯಲ್ಲಿ ಭಾನುವಾರ ನಡೆದ ಚಿತ್ರಸಂತೆಯಲ್ಲಿ ಭಾಗವಹಿಸಿದ ಕಲಾವಿದರ ಚಿತ್ರಗಳು ಪ್ರಶಸ್ತಿಗೆ ಆಯ್ಕೆ ಆಗಿವೆ.

ಹಿರಿಯರ ವಿಭಾಗ: ಟಿ.ಎಂ. ವೀರೇಶ್‌ ಅವರ `ಕುದುರೆ ಮತ್ತು ಸ್ತ್ರೀ ಚಿತ್ರ’ ಮತ್ತು ಜಿ.ಎಸ್‌. ಕೃಷ್ಣ ಅವರ ” ನಟರಾಜ” ಚಿತ್ರಕ್ಕೆ (ಪ್ರಥಮ), ಶಿವಪ್ಪ ಕೋಥ್‌ ಅವರ ” ಗಿಳಿಗಳು” ಮತ್ತು ಸಿದ್ದನಗೌಡ ಎಸ್‌. ಗಬಸವಳಿಗಿ ಅವರ “ವೀಣಾ ಪ್ರಾಣಿ” ಚಿತ್ರಕ್ಕೆ (ದ್ವಿತೀಯ), ಎಲ್‌.ರವಿ ಅವರ “ವಿಷ್ಣು” ಮಿನಿಯೇಚರ್ ಚಿತ್ರಕ್ಕೆ (ತೃತೀಯ) ಬಹುಮಾನ ಲಭಿಸಿದೆ.

ವಿದ್ಯಾರ್ಥಿ ವಿಭಾಗ: ಸಾಯಿ ಬ್ರಷ್ ಪ್ಲೇ ಅವರ ಒಟ್ಟು ಕಲಾಕೃತಿಗಳು, ಚಿದಾನಂದ ಅವರ “ಸಾಲುಮರದ ತಿಮ್ಮಕ್ಕ” ಚಿತ್ರಕ್ಕೆ (ಪ್ರಥಮ), ಸತೀಶ್‌ ಬಿರಾದಾರ್ ಅವರ ಒಟ್ಟು ಕಲಾಕೃತಿಗಳು ಮತ್ತು ಆರ್. ವಿಕಾಸ್‌ ಅವರ ಕಲಾಕೃತಿಗಳಿಗೆ (ದ್ವಿತೀಯ), ಸ್ನೇಹ ಪಬ್ಲಿಕ್‌ ಸ್ಕೂಲಿನ ಒಟ್ಟು ಕಲಾಕೃತಿಗಳಿಗೆ (ತೃತೀಯ) ಬಹುಮಾನ ದೊರೆತಿದೆ.

ಉತ್ತಮ ಸ್ಟಾಲ್‌ ನಿರ್ವಹಣೆ: ಸ್ಟಾಲ್ ನಂ 36ರ ಅರಳಪ್ಪು ದೇವರಾಜ್ ಮತ್ತು ಸ್ಟಾಲ್ ನಂ 40ರ ಪರಮೇಶ್ವರಪ್ಪ ಹುಲಮನಿ (ಪ್ರಥಮ),   ಸ್ಟಾಲ್ ನಂ 48ರ ಮೌನೇಶ್ ಬಡಿಗೇರ್‌ ಮತ್ತು ಸ್ಟಾಲ್ ನಂ 27ರ ಶ್ರೀಶೈಲ ಭಜಂತ್ರಿ (ದ್ವಿತೀಯ), ಸ್ಟಾಲ್ ನಂ. 8,25,96,69ರ ಮಾಧವಿ, ಪ್ರಿಯಾಂಕಾ, ಎಂ.ಎನ್. ಮೇಘಶ್ರೀ, ನೀತಾ ಹರ್ಷ ಗೌಡರ್‌ (ತೃತೀಯ) ಬಹುಮಾನ ಗಳಿಸಿದ್ದಾರೆ.

error: Content is protected !!