ಪಕ್ಷ ನಿಷ್ಠರನ್ನು ಮರೆತು ವಿರೋಧಿಗಳಿಗೆ ಸ್ಥಾನಮಾನ

ಪಕ್ಷ ನಿಷ್ಠರನ್ನು ಮರೆತು ವಿರೋಧಿಗಳಿಗೆ ಸ್ಥಾನಮಾನ

ಹರಪನಹಳ್ಳಿ : ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ

ಹರಪನಹಳ್ಳಿ, ಮಾ. 10- ಪಕ್ಷ ನಿಷ್ಠರನ್ನು ಮರೆತು ಪಕ್ಷ ವಿರೋಧಿಗಳಿಗೆ ಸ್ಥಾನಮಾನ ನೀಡಿರುವುದನ್ನು ಪ್ರತಿಯೊಬ್ಬ ಕಾರ್ಯಕರ್ತನೂ ವಿರೋಧಿಸಿದ್ದು, ತಕ್ಷಣದಿಂದಲೇ ಈಗಾಗಲೇ ಮಾಡಿರುವ ಪದಾಧಿಕಾರಿಗಳ ಆಯ್ಕೆಯನ್ನು ರದ್ದು ಮಾಡಬೇಕು. ರದ್ದು ಮಾಡದ ಹೊರತು ಮುಂಬರುವ ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ, ಚಟುವಟಿಕೆಗಳಿಗೆ ನಾವು ಭಾಗಿಯಾಗುವುದಿಲ್ಲ ಎಂದು ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಹೇಳಿದರು.

ತಾಲ್ಲೂಕಿನಿಂದ ಜಿಲ್ಲಾ ಬಿಜೆಪಿ ಕಮಿಟಿಗೆ ಹಾಗೂ ಮಂಡಲ ಪದಾಧಿಕಾರಿಗಳನ್ನಾಗಿ ಪಕ್ಷ ವಿರೋಧಿಗಳನ್ನು ಆಯ್ಕೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ 28 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದು, ಒಂದು ಬಾರಿ ಸಂಸದ, ಶಾಸಕ, ಸಚಿವನಾಗಿ ಕೂಡ ಪಕ್ಷಕ್ಕೆ ಕಿಂಚಿತ್ತು ಅಗೌರವ ತೋರಿಸದೇ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದೇನೆ. ಆದರೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಕ್ಷದ ತಾಲ್ಲೂಕು ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.

ಪಕ್ಷದ ಕಾರ್ಯಕರ್ತರು ಪಕ್ಷದ ಭದ್ರ ಬುನಾದಿ ಇದ್ದಂತೆ. ಅವರಿಗೆ ನನ್ನ ಬೆಂಬಲ ಸದಾ ಇರುತ್ತದೆ. ಕಾರ್ಯಕರ್ತರಿಲ್ಲದೆ ನಾವಿಲ್ಲ. ಶೀಘ್ರದಲ್ಲೇ ಕಾರ್ಯಕರ್ತರ ತಂಡ ಉಪಾಧ್ಯಕ್ಷರ ಬಳಿ ನಿಯೋಗ ಹೋಗಲಿದೆ. ನ್ಯಾಯಯುತ ಆಯ್ಕೆ ಆಗುವವರೆಗೂ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಹೇಳಿದರು.

ಈ ವೇಳೆ ಪುರಸಭೆ ಸದಸ್ಯರಾದ ಕಿರಣ್ ಶ್ಯಾನಭೋಗ್, ಜಾವಿದ್, ಗೌಳಿ ವಿನಯ್, ಹನು ಮಂತಪ್ಪ, ಜಿಲ್ಲಾ ಬಿಜೆಪಿ ಮಾಜಿ ಕಾರ್ಯದರ್ಶಿ ಹಾಗೂ ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಆರ್. ಲೋಕೇಶ್, ಪೂಜಾರ್ ಮಹೇಶ್, ಹಲುವಾ ಗಲು ಗಿರೀಶಪ್ಪ, ಕಲ್ಲೇರ್ ಬಸವರಾಜ್, ಯಡಿಹಳ್ಳಿ ಶೇಖರಪ್ಪ, ಉಪ್ಪಾರ ತಿಮ್ಮಣ್ಣ, ರಾಗಿಮಸಲವಾಡದ ಕರೇಗೌಡ್ರು, ಹಲುವಾಗಲು ದ್ಯಾಮಪ್ಪ, ವೀರಭ ದ್ರಪ್ಪ, ಯಡತ್ತಿನಹಳ್ಳಿ ಮಂಜುನಾಥ, ಕೆ.ಪ್ರಕಾಶ್, ಕವಸರ ನಾಗರಾಜ್, ಯಲ್ಲಜ್ಜಿ ಹನುಮಂತ, ನೀಲಗುಂದ ಶಾನಭೋಗರ ಗಿರೀಶ್, ರೆಡ್ಡಿ ಸಿದ್ಧೇಶ್, ಆಲಮರಸಿಕೆರೆ ಮಂಜುನಾಥ್, ಮತ್ತಿಹಳ್ಳಿ ಕೊಟ್ರೇಶ್, ವಾಗೀಶ್, ಲತಾ, ಸುವರ್ಣಮ್ಮ, ವೆಂಕಮ್ಮ ಮತ್ತಿತರರು ಭಾಗವಹಿಸಿದ್ದರು.

error: Content is protected !!