ಹರಿಹರ : ಕುತೂಹಲ ಕೆರಳಿಸಿದ ಜಿದ್ದಾ ಜಿದ್ದಿ ಖವ್ವಾಲಿ

ಹರಿಹರ : ಕುತೂಹಲ ಕೆರಳಿಸಿದ ಜಿದ್ದಾ ಜಿದ್ದಿ ಖವ್ವಾಲಿ

ಹರಿಹರ, ಮಾ.10- ನಗರದ ದರ್ಗಾ ಸಮಿತಿ ವತಿಯಿಂದ ತುಂಗಭದ್ರಾ ನದಿ ಹತ್ತಿರದ ಹಜರತ್ ಸೈಯದ್ ನಾಡಬಂದ್ ಷಾ ವಲಿ ಖಾದರಿ ಸಂದಲ್ ಓ ಉರುಸ್ ಪ್ರಯುಕ್ತ ಜಿದ್ದಾ ಜಿದ್ದಿ ಖವ್ವಾಲಿ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಗಲೇಫ್ ಮತ್ತು ಸಂದಲ್‌ ದರ್ಗಾದಿಂದ ಕಲಾತಂಡದ ಮೆರವಣಿಗೆ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ನಾಡಬಂದ್ ಷಾ-ವಲಿ ದರ್ಗಾಗೆ ಆಗಮಿಸಿತು. ನಂತರ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಖವ್ವಾಲಿ ಕೇಳಿದರು.

ಈ ವೇಳೆ ನಂದಿಗಾವಿ ಶ್ರೀನಿವಾಸ್, ನಗರಸಭೆ ಸದಸ್ಯರಾದ ಬಿ. ಅಲ್ತಾಫ್, ಇಬ್ರಾಹಿಂ, ಕೆ.ಜಿ. ಸಿದ್ದೇಶ್, ಎಂ.ಎಸ್. ಬಾಬುಲಾಲ್,  ಆಡಳಿತ ಮಂಡಳಿಯ ಬಿ.ಕೆ. ಸೈಯದ್ ರೆಹಮಾನ್, ಸೈಯದ್ ಜಬೀವುಲ್ಲಾ, ಬಿ.ಕೆ. ಸೈಯದ್ ಬಾಷಾ, ಅಲಿ ಅಹ್ಮದ್, ಹಾಜಿಹಾಲಿ ಖಾನ್, ಅಮ್ಜದ್ ಖಾನ್, ಮೊಹಮ್ಮದ್ ಇಬ್ರಾಹಿಂ ಸಾಬ್, ಶಬ್ಬೀರ್ ಅಹ್ಮದ್ ಖುರೇಶಿ, ಅಲ್ಲಾಬಕ್ಷ್ , ಗೌಸ್ ಖಾನ್,  ಅಬ್ದುಲ್ ಸತ್ತರ್ ಸಾಬ್, ಸೈಯದ್ ಮೆಹಬೂಬ್ ಸಾಬ್, ಮತ್ತು ಉರುಸ್ ಕಮಿಟಿ ಅಧ್ಯಕ್ಷ ಆಸೀಫ್ ಅಲಿ ಖಾನ್, ಮುಸ್ತಾಫ್, ಅಬ್ದುಲ್ ಘನಿ, ರೆಹಮಾನ್ ಪೇಂಟರ್, ಇರ್ಫಾನ್ ದರ್ವೇಶ್, ಅಲ್ತಾಫ್, ದಾದಾಪೀರ್ ಭಾನುವಳ್ಳಿ, ಇತರರು ಹಾಜರಿದ್ದರು.

error: Content is protected !!