ಕುರುವತ್ತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ

ಕುರುವತ್ತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ

ಹೂವಿನಹಡಗಲಿ, ಮಾ. 10 – ತಾಲ್ಲೂಕು ಐತಿಹಾಸಿಕವಾಗಿಯೂ, ಪೌರಾಣಿಕವಾಗಿಯೂ ಪ್ರಸಿದ್ದಿಯಾದ ಪಶ್ಚಿಮ ವಾಹಿನಿ ದಕ್ಷಿಣ ಕಾಶಿ ತುಂಗಭದ್ರಾ ತೀರದಲ್ಲಿ ರಾರಾಜಿಸುತ್ತಿರುವ ಸುಕ್ಷೇತ್ರ ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಇಂದು ಸಂಜೆ 4.55ಕ್ಕೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು. 

ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ರಥ ಸಾಗುತ್ತಿದ್ದಂತೆ `ಹರ ಹರ ಹರ ಮಹಾದೇವ’ ಭಕ್ತರ ಜೇಂಕಾರ ಮುಗಿಲು ಮುಟ್ಟಿತು ರಥವು ಚಲಿಸುತ್ತಿದ್ದಂತೆಯೇ ಭಕ್ತರು ತೆಂಗಿನಕಾಯಿ ಒಡೆದು ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಕೈಮುಗಿದು ಭಕ್ತಿ ಸಮರ್ಪಿಸಿದರು.

error: Content is protected !!