ನಗರದಲ್ಲಿ ಇಂದು- ನಾಳೆ ದೇಹದಾರ್ಢ್ಯ ಸ್ಪರ್ಧೆ

ದಾವಣಗೆರೆ, ಮಾ. 8- ಇಂಡಿಯನ್  ಬಾಡಿ ಬಿಲ್ಡರ್ಸ್ ಮುಂಬೈ ಹಾಗೂ ಮಂಜು ಮೊಗವೀರ್ ಸ್ನೇಹಿತರ ಬಳಗದಿಂದ ನಾಳೆ ದಿನಾಂಕ 9 ಮತ್ತು ನಾಡಿದ್ದು  10 ರಂದು ಸಂಜೆ 4 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ `ಡ್ರೀಮ್ ಕ್ಲಾಸಿಕ್-2024′  ದಕ್ಷಿಣ ಭಾರತ, ರಾಜ್ಯ ಮತ್ತು ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಡಾಪಟು ಮಂಜು ಮೊಗವೀರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಳೆ ದಿನಾಂಕ 9 ರಂದು ರಾಜ್ಯಮಟ್ಟದ ಮೆನ್ಸ್ ಫಿಸಿಕ್ಯೂ ಹಾಗೂ ಜಿಲ್ಲಾ ಮಟ್ಟದ ದೇಹರ್ದಾರ್ಢ್ಯ ಸ್ಪರ್ಧೆ, ಮಾ. 10 ರಂದು ದಕ್ಷಿಣ ಭಾರತ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ. 

ಮುಖ್ಯ ಅತಿಥಿಗಳಾಗಿ ಎಸ್.ಎಸ್. ಮಲ್ಲಿಕಾರ್ಜುನ್, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಜೆ.ಎನ್. ಶ್ರೀನಿವಾಸ್, ಪ್ರವೀಣ್ ಹುಲ್ಮನಿ, ಸುಜಿತ್ ಮನಿ ಬಾಸ್ಕೆಟ್, ಪ್ರತಾಪ್ ರಾವ್, ಮಂಜುನಾಥ್ ಗಡಿಗುಡಾಳ್ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಂ.ಆರ್. ನವೀನ್, ಗಿರೀಶ್ ಕುಮಾರ್, ಕೆ.ಎಸ್ ಪ್ರಮೋದ್, ರವಿರಾಜ್, ಎನ್‌.ಜೆ. ನಿಂಗಪ್ಪ, ಚೇತನ್ ಉಪಸ್ಥಿತರಿದ್ದರು.

error: Content is protected !!