ನಾಳೆ `ಮತದಾನ ಜಾಗೃತಿ’ ಕವಿಗೋಷ್ಠಿ

ದಾವಣಗೆರೆ, ಮಾ. 8 –  ನಗರದ  ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ನಾಡಿದ್ದು ದಿನಾಂಕ 10ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ  ಕಲಾಕುಂಚ ಕಛೇರಿಯ ಸಭಾಂಗಣದಲ್ಲಿ `ಮತದಾನ ಜಾಗೃತಿ ಕವಿಗೋಷ್ಠಿ’ ಹಮ್ಮಿಕೊಳ್ಳಲಾಗಿದೆ ಎಂದು  ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಆಸಕ್ತ ನವ, ಯುವ, ಹಿರಿಯ, ಕಿರಿಯ, ಕವಿ-ಕವಯತ್ರಿಯರು ವ್ಯಾಟ್ಸಾಪ್  9449004004 ನಂಬರ್‌ಗೆ ಹೆಸರು ನೋಂದಾ ಯಿಸಬಹುದು. ವಿವರಕ್ಕೆ ಸಂಪರ್ಕಿಸಿ: 9538732777.

error: Content is protected !!