ದಾವಣಗೆರೆ, ಮಾ.8- ವಚನಾಮೃತ ಬಳಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದ ಆನಂದ ಧಾಮದಲ್ಲಿ ಹಿರಿಯ ವನಿತೆಯರೊಡನೆ ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಇಲ್ಲಿನ ಹಿರಿಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಸೌಮ್ಯ ಸತೀಶ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯರಾದ ಸರೋಜಮ್ಮ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು. ಮಧುಮತಿ ಗಿರೀಶ್ ವಂದಿಸಿದರು.
ಆನಂದ ಧಾಮದ ಉಪಾಧ್ಯಕ್ಷೆ ಸುಷ್ಮಾ, ಮಮತಾ, ನಾಗರಾಜ್, ರೇಖಾ ಬೇತೂರ್, ಕವಿತಾ ಕೊಟ್ರಬಸಪ್ಪ, ತನುಜಾ ಬೆಳ್ಳುಳ್ಳಿ, ಜ್ಯೋತಿ ಬೆಳಗಾವಿ, ಸುಮಾ ಬೇತೂರ್, ಶಿಲ್ಪ ಅಜ್ಜಂಪುರ, ರಾಜಶ್ರೀ, ಹಿರಿಯರಾದ ಕಸ್ತೂರಮ್ಮ, ಕಾಶಮ್ಮ, ಲತಾ , ಸರಸ್ವತಮ್ಮ ಇತರರಿದ್ದರು.