ಇಂದು ಸಮಾಜ ಸಿರಿ ಪ್ರಶಸ್ತಿ ಪ್ರದಾನ

ದಾವಣಗೆರೆ, ಮಾ. 8- ಜಿಲ್ಲಾ ಯೋಗ ಒಕ್ಕೂಟ ಹಾಗೂ ಎಂಸಿಸಿ ಎ ಬ್ಲಾಕ್ ಶಿರಡಿ ಸಾಯಿಬಾಬಾ ಮಂದಿರದ ಸಂಯುಕ್ತಾಶ್ರಯ ದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ನಾಳೆ ದಿನಾಂಕ 9 ರಂದು ಸಂಜೆ 4 ಗಂಟೆಗೆ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ `ಸಮಾಜ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್.ಎಸ್. ಲೈಫ್‌ಕೇರ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು.  ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ, ಒಕ್ಕೂಟದ ಗೌರವಾಧ್ಯಕ್ಷ ಬಿ.ಸಿ. ಉಮಾಪತಿ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಬಿ.ಎಸ್. ಚನ್ನಬಸಪ್ಪ ಅಂಡ್‌ ಸನ್ಸ್ ದೀಪಾ ಶಿವಕುಮಾರ್, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಕಾರ್ಯದರ್ಶಿ ಎಂ. ಶಿವಪ್ಪ, ಖಜಾಂಚಿ ಹೆಚ್.ಎಸ್. ಜಾಧವ್, ಜಿಲ್ಲಾ ಯೋಗ ಒಕ್ಕೂಟದ ಕಾರ್ಯದರ್ಶಿ ಡಾ. ಯು. ಸಿದ್ದೇಶ್ ಮತ್ತಿತರರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಾ. ಯು. ಸಿದ್ದೇಶ್, ಪರಶುರಾಮ್, ಮಧುಸೂದನ್, ಎನ್. ಪರಶುರಾಮ್, ರಾಜು ಬದ್ದಿ, ತೀರ್ಥರಾಜ್ ಹೋಲೂರು, ಜಯಣ್ಣ ಬಾದಾಮಿ, ಅನಿಲ್ ರಾಯ್ಕರ್, ವಿರೂಪಾಕ್ಷ ಜವಳಿ ಮತ್ತಿತರರಿದ್ದರು.

error: Content is protected !!