ನಗರದಲ್ಲಿ ನಾಳೆ ಪೊಲೀಸ್‌ ಇಲಾಖೆಯಿಂದ ಮ್ಯಾರಥಾನ್

ನಗರದಲ್ಲಿ ನಾಳೆ ಪೊಲೀಸ್‌ ಇಲಾಖೆಯಿಂದ ಮ್ಯಾರಥಾನ್

ದಾವಣಗೆರೆ, ಮಾ.8- ರಾಜ್ಯ ಪೊಲೀಸ್ ಇಲಾಖೆ  ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯು ನಗರದಲ್ಲಿ ನಾಡಿದ್ದು ದಿನಾಂಕ 10ರಂದು ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಜಾಗೃತಿ ಮೂಡಿಸುವ ಉದ್ದೇಶದಿಂದ ಮ್ಯಾರಥಾನ್‌ ಓಟ ಏರ್ಪಡಿಸಲಾಗಿದೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಂದು ಬೆಳಗ್ಗೆ 6 ಗಂಟೆಗೆ, 5 ಕಿ.ಮೀ ಮತ್ತು 10 ಕಿ.ಮೀ ಮ್ಯಾರಥಾನ್ ಓಟ ನಡೆಯಲಿದ್ದು, ಪೊಲೀಸರೊಂದಿಗೆ ಜಿಲ್ಲೆಯ ನಾಗರಿಕರು ಸಹ ಸ್ವ-ಹಿತಾಸಕ್ತಿಯಿಂದ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಯೂಆರ್‌ ಕೋಡ್ ಮೂಲಕ ಹೆಸರು ನೋಂದಾಯಿಸಬೇಕು. ನಾಡಿದ್ದು ದಿನಾಂಕ 9ರೊಳಗೆ ಹೆಸರು ನೋಂದಾಯಿಸಬೇಕು.

10ಕಿ.ಮೀ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಮೂರು ವಿಜೇತರಿಗೆ ನಗದು ಬಹುಮಾನ ನೀಡಲಿದ್ದು, ಪ್ರಥಮ ಬಹುಮಾನ 10,000/- ರೂ.ಗಳು, ದ್ವಿತೀಯ 5,000/- ರೂ.ಗಳು, ತೃತೀಯ 3,000 /- ರೂ.ಗಳ ನಗದು ನೀಡಲಾಗುವುದು.

5 ಕಿ.ಮೀ ಮ್ಯಾರಥಾನ್ ಸ್ಪರ್ಧೆಯಲ್ಲಿ, ಪ್ರಥಮ ಬಹುಮಾನ  5,000/- ರೂ.ಗಳು, ದ್ವಿತೀಯ ಬಹುಮಾನ 3,000 /- ರೂ.ಗಳು ಮತ್ತು ತೃತೀಯ ಸ್ಥಾನ ಪಡೆದವರಿಗೆ 2,000/- ರೂ.ಗಳ ನಗದು ಬಹುಮಾನ ಪಡೆಯಬಹುದು.

10 ಕಿ.ಮೀ ಓಟದ ಮಾರ್ಗ:  ಜಿಲ್ಲಾ ಕ್ರೀಡಾಂಗಣದಿಂದ  ಡೆಂಟಲ್ ಕಾಲೇಜ್ ರಸ್ತೆ,  ಗುಂಡಿ ವೃತ್ತ, ಶಾಮನೂರು ರಸ್ತೆ, ಲಕ್ಷ್ಮಿ ಪ್ಲೋರ್ ಮಿಲ್ ವೃತ್ತ, ಬಾಪೂಜಿ ಬ್ಯಾಂಕ್ ಸಮುದಾಯ ವೃತ್ತ, ಶಾರದಾಂಭ ವೃತ್ತ, ಕರ್ನಲ್ ರವೀಂದ್ರನಾಥ್ (ಕ್ಲಾಕ್ ಟವರ್ ವೃತ್ತ), ಮೂಲಕ ನೇರವಾಗಿ ಸಂಗೊಳ್ಳಿ ರಾಯಣ್ಣ ವೃತ್ತ, ಅರುಣ ವೃತ್ತ (ಚೆನ್ನಮ್ಮ ವೃತ್ತ), ಎಂ.ಜಿ ವೃತ್ತದಿಂದ  ಜಯದೇವ ವೃತ್ತದ ಮೂಲಕ ವಿದ್ಯಾರ್ಥಿ ಭವನ ಜಂಕ್ಷನ್ ತಲುಪಿ ಕೆಟಿಜೆ ನಗರ 16ನೇ ಕ್ರಾಸ್ ಮುಂಭಾಗದ ಬಾಪೂಜಿ ಆಸ್ಪತ್ರೆ ರಸ್ತೆ ಬಳಿ ಬಲ ತಿರುವು ಪಡೆದು ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದ ಒಳಗೆ ಬರುವುದು. 

5 ಕಿ.ಮೀ ಓಟದ ಮಾರ್ಗ: ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಹದಡಿ ರಸ್ತೆಯ ಮುಖ್ಯದ್ವಾರದ ಮೂಲಕ ಡಿಆರ್ಆರ್ ಕಾಲೇಜ್ ವೃತ್ತ, ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದ ಬಳಿ ಬಲ ತಿರುವು ಪಡೆದು, ಕಾಫಿ ಡೇ ವೃತ್ತ, ನೂತನ ಕಾಲೇಜ್ ರಸ್ತೆ ಮಾರ್ಗವಾಗಿ ನೂತನ ಕಾಲೇಜ್ ಬಳಿ ಬಲ ತಿರುವು ಪಡೆದು, ಆಂಜನೇಯ ಬಡಾವಣೆಯ 15ನೇ ಕ್ರಾಸ್‌ನಲ್ಲಿ ಎಡ ತಿರುವು ಪಡೆದು, ಸಂಜೀವಿನಿ ನರ್ಸಿಂಗ್ ಕಾಲೇಜ್ ಬಳಿ ಬಲ ತಿರುವು ಪಡೆದು, ಆಂಜನೇಯ ದೇವಸ್ಥಾನ  ಮಾರ್ಗವಾಗಿ ಮೆಡಿಕಲ್ ಬಾಯ್ಸ್ ಹಾಸ್ಟೆಲ್ ರಸ್ತೆ ಮೂಲಕ ಸಾಗಿ ಡೆಂಟಲ್ ಕಾಲೇಜ್ ರಸ್ತೆ ತಲುಪಿ ಅಲ್ಲಿಂದ ಎಡ ತಿರುವು ಪಡೆದು, ಯುಬಿಡಿಟಿ ಕಾಲೇಜ್ ಬಳಿ ಬಲ ತಿರುವು ಪಡೆದುಕೊಂಡು ಎಆರ್‌ಜಿ ಕಾಲೇಜ್ ರಸ್ತೆ ಮೂಲಕ ಹದಡಿ ರಸ್ತೆ ತಲುಪಿ ನಂತರ ಹದಡಿ ರಸ್ತೆ ಭಾಗದ ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದ ಒಳ ಬರುವುದು.

error: Content is protected !!