ದಾವಣಗೆರೆ,ಮಾ.8- ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಯೋಜನೆಗಳ ಕುರಿತು ಪ್ರಚಾರ ನಡೆಸುತ್ತಾ, `ಭಾರತ್ ಬಚಾವ್, ವೋಟ್ ಫಾರ್ ಬಿಜೆಪಿ’ ಸೈಕಲ್ ಜಾಥಾ ಮೂಲಕ ಅಭಿಯಾನ ಆರಂಭಿಸಿರುವ ಹುಬ್ಬಳ್ಳಿ ತಾಲ್ಲೂಕಿನ ಮಂಟೂರು ಗ್ರಾಮದ ಯುವಕ ಭರತ ಸವಣೂರು ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮೋದಿ ಪಡೆಯ ಜಿಲ್ಲಾ ಸಂಚಾಲಕ ಸುಧೀಂದ್ರ ಕುಮಾರ್, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ವಿಜಯೇಂದ್ರ ಡಿ.ಟಿ., ಮಂಜುನಾಥ್, ಸೂರಜ್ ಬಿ.ಎಸ್., ಸಂದೀಪ್ ಜೈನ್, ರಮೇಶ್ ಎನ್.ಇ. ಇತರರು ಭಾಗವಹಿಸಿದ್ದರು.