ಬಿಜೆಪಿ ಪರ ಸೈಕಲ್ ಜಾಥಾ; ಯುವಕನಿಗೆ ಸಂಸದ ಸಿದ್ದೇಶ್ವರ ಸನ್ಮಾನ

ಬಿಜೆಪಿ ಪರ ಸೈಕಲ್ ಜಾಥಾ;  ಯುವಕನಿಗೆ ಸಂಸದ ಸಿದ್ದೇಶ್ವರ ಸನ್ಮಾನ

ದಾವಣಗೆರೆ,ಮಾ.8- ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ಜನಪರ ಯೋಜನೆಗಳ ಕುರಿತು ಪ್ರಚಾರ ನಡೆಸುತ್ತಾ, `ಭಾರತ್ ಬಚಾವ್, ವೋಟ್ ಫಾರ್ ಬಿಜೆಪಿ’ ಸೈಕಲ್ ಜಾಥಾ ಮೂಲಕ  ಅಭಿಯಾನ ಆರಂಭಿಸಿರುವ  ಹುಬ್ಬಳ್ಳಿ ತಾಲ್ಲೂಕಿನ ಮಂಟೂರು ಗ್ರಾಮದ ಯುವಕ  ಭರತ ಸವಣೂರು ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಸನ್ಮಾನಿಸಿದರು.  

ಈ ಸಂದರ್ಭದಲ್ಲಿ ಮೋದಿ ಪಡೆಯ ಜಿಲ್ಲಾ ಸಂಚಾಲಕ ಸುಧೀಂದ್ರ ಕುಮಾರ್, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ  ವಿಜಯೇಂದ್ರ ಡಿ.ಟಿ., ಮಂಜುನಾಥ್, ಸೂರಜ್ ಬಿ.ಎಸ್., ಸಂದೀಪ್ ಜೈನ್, ರಮೇಶ್ ಎನ್.ಇ.   ಇತರರು ಭಾಗವಹಿಸಿದ್ದರು.

error: Content is protected !!