ಉಕ್ಕಡಗಾತ್ರಿ ಅಜ್ಜಯ್ಯನಿಗೆ ಇಂದು ಚಿನ್ನದ ಕಿರೀಟ ಧಾರಣೆ

ಉಕ್ಕಡಗಾತ್ರಿ ಅಜ್ಜಯ್ಯನಿಗೆ  ಇಂದು ಚಿನ್ನದ ಕಿರೀಟ ಧಾರಣೆ

ಸುಕ್ಷೇತ್ರ ಉಕ್ಕಡಗಾತ್ರಿಯ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನಿಗೆ ಭಕ್ತರ ನೆರವಿನಿಂದ ಮಾಡಿಸಿರುವ 2.5 ಕೆ.ಜಿ. ತೂಕದ ಚಿನ್ನದ ಕಿರೀಟವನ್ನು ಇಂದು ಬೆಳಗ್ಗೆ ಕರ್ತೃಗದ್ದುಗೆಗೆ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿದ ನಂತರ 12-30 ಕ್ಕೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಅಜ್ಜಯ್ಯನಿಗೆ ಧಾರಣೆ ಮಾಡಲಿದ್ದಾರೆ ಎಂದು ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್. ಸುರೇಶ್ ತಿಳಿಸಿದ್ದಾರೆ. 

ಅಜ್ಜಯ್ಯನಿಗೆ ಚಿನ್ನದ ಕಿರೀಟ ಧಾರಣೆ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ, ಬಿ.ಪಿ. ಹರೀಶ್, ಎಸ್ ರಾಮಪ್ಪ, ಎಸ್.ಎಸ್. ಗಣೇಶ್,  ನಂದಿಗಾವಿ ಶ್ರೀನಿವಾಸ್ ಮತ್ತು ಇತರರು ಭಾಗವಹಿಸಲಿದ್ದಾರೆ.                      

ಜಾತ್ರೆ : ಇದೇ ದಿನಾಂಕ 10 ರಿಂದ 17 ರವರೆಗೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರೆ ಜರುಗಲಿದ್ದು, 11 ರಂದು ಅಜ್ಜಯ್ಯನ ಮಹಾರಥೋತ್ಸವ ನಡೆಯಲಿದೆ.

error: Content is protected !!