ರಾಣೇಬೆನ್ನೂರಿನಲ್ಲಿ ಇಂದು ಶಿವರಾತ್ರಿ

ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಕಾಕಿ ಸಭಾ ಭವನದಲ್ಲಿ ಧಾರ್ಮಿಕ ಸಭೆ ಏರ್ಪಡಿಸಲಾಗಿದೆ. ಶಾಸಕ ಪ್ರಕಾಶ್ ಕೋಳಿವಾಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ರುಕ್ಮಿಣಿ ಸಾವುಕಾರ ಅಧ್ಯಕ್ಷತೆ ವಹಿಸುವರು. ಹದಡಿಯ ಬ್ರಹ್ಮಾಕುಮಾರಿ ರೂಪ ಅವರು  ಸಂಸ್ಥೆಯ ಪರಿಚಯ ಮಾಡುವರು.

ಮಾಜಿ ಶಾಸಕ ಅರುಣಕುಮಾರ, ವರ್ತಕರಾದ ಎಂ. ಎಸ್. ಅರಕೇರಿ, ಜಿ.ಜಿ. ಹೊಟ್ಟಿಗೌಡ್ರ, ಭಾರತಿ ಜಂಬಗಿ,  ಮಂಗಳಗೌರಿ ಪೂಜಾರ, ಶ್ರೀನಿವಾಸ ಕಾಕಿ, ರೂಪಾ ಕಾಕಿ ಅತಿಥಿಗಳಾಗಿ ಭಾಗವಹಿಸುವರು.

35 ಕಾರುಗಳು ಹಾಗೂ ವಿವಿಧ ವಾದ್ಯ ತಂಡಗಳೊಂದಿಗೆ ಮೆರವಣಿಗೆ  ಮುಖ್ಯ ಬೀದಿಗಳಲ್ಲಿ ಸಂಚರಿಸಿ ಕಾಕಿ ಜನಸೇವಾ ಸಭಾ ಮಂದಿರಕ್ಕೆ ಬರಲಿದೆ. ನಂತರ ಧಾರ್ಮಿಕ ಸಭೆ, ಓಂ ನಮಃ ಶಿವಾಯ ಮಹಾಮಂತ್ರದ ಅರ್ಥ ಸ್ವರೂಪದ ಜಾಗರಣೆ ನಡೆಯಲಿದೆ ಎಂದು ಸಂಸ್ಥೆಯ ಸ್ಥಳೀಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಾಲತಿ ತಿಳಿಸಿದ್ದಾರೆ.

error: Content is protected !!