ವಿದ್ಯಾನಗರ ಈಶ್ವರ, ಪಾರ್ವತಿ, ಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಕಾರ್ಯಕ್ರಮ

ವಿದ್ಯಾನಗರ ಈಶ್ವರ, ಪಾರ್ವತಿ, ಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಕಾರ್ಯಕ್ರಮ

ದಾವಣಗೆರೆ ವಿದ್ಯಾನಗರದ ಶ್ರೀ ಈಶ್ವರ, ಪಾರ್ವತಿ, ಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗಿನ ಜಾವ 5 ಗಂಟೆಗೆ ಶಿವನಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗಲಿದ್ದು, ಸಂಜೆ 7 ಕ್ಕೆ ವಿದ್ಯಾನಗರದ ಶ್ರೀ ಗುರು ವಚನ ಸಂಸ್ಥೆ, ಆರೋಹಿ ಸಂಗೀತ ಕಲಾ ಸಂಸ್ಥೆ, ಶರಧಿ ಸಂಗೀತ ಪಾಠಶಾಲೆಯ ಶೋಭಾ, ಅನುಷ ಮತ್ತು ಸಂಗಡಿಗರು, ಈಶ್ವರ ಪಾರ್ವತಿ ಗಣಪತಿ ಮಹಿಳಾ ಸಂಘದವರಿಂದ ಸುಗಮ ಸಂಗೀತ, ನಗರದ ಅದಮ್ಯ ಸಂಗೀತ ಸಂಸ್ಥೆಯ ವಿದುಷಿ ಗೀತಾ ಮಾಲತೇಶ, ಸಂಗೀತ ಶಿಕ್ಷಕಿ ಅರುಣಾದೇವಿ ಮದಾನೆ ಇವರಿಂದ ವೀಣಾ ವಾದನ, ಶಾರದಾ ಮಹಿಳಾ ಮಂಡಳಿಯವರಿಂದ ಸಂಗೀತ, ಡಿ.ಆರ್. ದಕ್ಷಾ ಅವರಿಂದ ಕೀಬೋರ್ಡ್ ವಾದನ ನಡೆಯಲಿದೆ.

ಗುಲ್ಬರ್ಗಾ ಆಕಾಶವಾಣಿ ಕಲಾವಿದ ಸಂಗಮೇಶ ಪಾಟೀಲ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ, ರಾತ್ರಿ 1 ಗಂಟೆಗೆ ನಮನ ಅಕಾಡೆಮಿಯ ವಿದುಷಿ ಡಿ.ಕೆ. ಮಾಧವಿ ಮತ್ತು ಶಿಷ್ಯರಿಂದ ಶಿವಸ್ಮರಣೆ ನೃತ್ಯ, ದೇವಸ್ಥಾನದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಆಕಾಶವಾಣಿ ಕಲಾವಿದರಾದ ಸುರೇಶ ಕೊಪ್ಪಳ, ಶೇಖರ ಇಮ್ಮಡಿ ತಬಲಾ ಸಾಥ್ ನೀಡಲಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬೆಳವನೂರು ನಾಗರಾಜಪ್ಪ, ನಿಕಟ ಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ತಿಳಿಸಿದ್ದಾರೆ. 

error: Content is protected !!