ಕೆ.ಬೇವಿನಹಳ್ಳಿಯಲ್ಲಿ ಶಾಲಾ ಸುಧಾರಣಾ ಸಮಿತಿ ಮನವಿ

ಕೆ.ಬೇವಿನಹಳ್ಳಿಯಲ್ಲಿ  ಶಾಲಾ ಸುಧಾರಣಾ ಸಮಿತಿ ಮನವಿ

ಹರಿಹರ,ಮಾ.6-  ತಾಲೂಕಿನ ಕೆ.ಬೇವಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾ ಸುಧಾರಣಾ ಸಮಿತಿಯ ವತಿಯಿಂದ  ಕ್ಷೇತ್ರದ  ಶಾಸಕ ಬಿ.ಪಿ. ಹರೀಶ್ ರವರಿಗೆ ಅನುದಾನ ಕೋರಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಇಸಿಓ ಮಂಜುನಾಥ್,  ಬಿಆರ್‌ಸಿ ತಿಪ್ಪೇಸ್ವಾಮಿ, ಬಿಆರ್‌ಪಿ ಶ್ರೀಮತಿ ಭಾಗ್ಯಲಕ್ಷ್ಮಿ, ಮುಖ್ಯೋಪಾ ಧ್ಯಾಯ ರಾದ ಇಂದ್ರಮ್ಮ, ಎನ್‌ಪಿಎಸ್ ನೌಕರರ ಸಂಘದ ಕಾರ್ಯದರ್ಶಿ ಸಂಗಣ್ಣನವರ್ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಮಹೇಶ್, ಮುಖಂಡರಾದ ನಾಗರಾಜ್ ಅಂಗಡಿ, ಭಾಗ್ಯಮ್ಮ, ಸವಿತಾ, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!