ದೊಡ್ಡಬಾತಿಯಲ್ಲಿ ಛೇರ್ಮನ್ ಕೆ.ಜಿ. ಚಂದ್ರಣ್ಣ ವೃತ್ತ ಉದ್ಘಾಟನೆ

ದೊಡ್ಡಬಾತಿಯಲ್ಲಿ ಛೇರ್ಮನ್  ಕೆ.ಜಿ. ಚಂದ್ರಣ್ಣ ವೃತ್ತ ಉದ್ಘಾಟನೆ

ದಾವಣಗೆರೆ, ಮಾ.6- ದೊಡ್ಡಬಾತಿಯಲ್ಲಿ ದಾವಣಗೆರೆ – ಹರಿಹರ ರಸ್ತೆಯಲ್ಲಿನ ಮುಖ್ಯ ವೃತ್ತಕ್ಕೆ ಛೇರ್ಮನ್ ಕೆ.ಜಿ. ಚಂದ್ರಣ್ಣ ವೃತ್ತ ಎಂದು ನಾಮಕರಣ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಉದ್ಘಾಟಿಸಿದರು. 

ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಎಂ.ಬಿ. ಅಶ್ವತ್ಥ್, ಇಒ ರಾಮಭೋವಿ, ಛೇರ್ಮನ್ ಕೆ.ಜಿ.ಚಂದ್ರಣ್ಣನವರ ಪುತ್ರ ಹಾಗೂ ದೊಡ್ಡಬಾತಿ ಕಾಂಗ್ರೆಸ್ ಮುಖಂಡ ಕೆ.ಜಿ. ಉಮೇಶ್, ದೊಡ್ಡಬಾತಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಟಿ. ಮಂಜುಳ, ಆರ್. ಸೀತಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮುದೇಗೌಡ್ರ ಗಿರೀಶ್, ಬೇತೂರು ಕರಿಬಸಪ್ಪ, ಮುಖಂಡರಾದ ಮಾಗಾನಹಳ್ಳಿ ಪರಶುರಾಮ್, ಜೆಸಿಬಿ ಹನುಮಂತಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!