ದಾವಣಗೆರೆ, ಮಾ. 5 – ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಇದೇ ದಿನಾಂಕ 10ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಲಾಕುಂಚ ಕಛೇರಿಯ ಸಭಾಂಗಣದಲ್ಲಿ `ಮತದಾನ ಜಾಗೃತಿ ಕವಿಗೋಷ್ಠಿ’ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಆಸಕ್ತ ನವ, ಯುವ, ಹಿರಿಯ, ಕಿರಿಯ, ಕವಿ-ಕವಯತ್ರಿಯರು ವ್ಯಾಟ್ಸಾಪ್ 9449004004 ನಂಬರ್ಗೆ ಹೆಸರು ನೋಂದಾಯಿಸಬಹುದು. ವಿವರಕ್ಕೆ ಸಂಪರ್ಕಿಸಿ: 9538732777.