ಕೊಟ್ಟೂರು ಪಾದಯಾತ್ರಿಗಳಿಗೆ ಪ್ರಸಾದ ವಿತರಣೆ

ಕೊಟ್ಟೂರು ಪಾದಯಾತ್ರಿಗಳಿಗೆ ಪ್ರಸಾದ ವಿತರಣೆ

ಹರಪನಹಳ್ಳಿ, ಮಾ. 4- ಬಿದ್ದ ಹನುಮಪ್ಪನಮಟ್ಟಿಯ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ ಮತ್ತು ಕೆ. ಬೇವಿನಹಳ್ಳಿ ಗ್ರಾಮಸ್ಥರ ವತಿಯಿಂದ ಕೊಟ್ಟೂರಿಗೆ ಹೋಗುವ ಪಾದಯಾತ್ರಿಗಳಿಗೆ ಉಪಹಾರ, ಪಾನಕ ಮತ್ತು ಮಜ್ಜಿಗೆ ಸೇರಿದಂತೆ ಪ್ರಸಾದ ವಿತರಿಸಿದರು.

ಕಂಚಿಕೆರೆ-ಅರಸಿಕೆರೆ ಮಾರ್ಗವಾಗಿ ಹೋಗುವ ಪಾದಯಾತ್ರಿ ಕರು ಶ್ರೀಕ್ಷೇತ್ರ ಬಿದ್ದ ಹನುಮಪ್ಪನಮಟ್ಟಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ  ಪ್ರಸಾದ ಸೇವಿಸಿ ಕೆಲಹೊತ್ತು ವಿಶ್ರಾಂತಿ ಪಡೆದು ಯಾತ್ರೆ ಮುಂದುವರೆಸುತ್ತಿದ್ದರು.

ಈ ವೇಳೆ ಕೆ.ಬೇವಿನಹಳ್ಳಿ ಗ್ರಾಮದ ಜಿ.ಎಸ್. ಮಹೇಶ್ವರಪ್ಪ ಗೌಡ್ರು, ಅವರ ಕುಟುಂಬ ಮತ್ತು ಗ್ರಾಮಸ್ಥರು, ಶ್ರದ್ಧಾ ಭಕ್ತಿಯಿಂದ ದಾಸೋಹ ಸೇವೆಯಲ್ಲಿ ಪಾಲ್ಗೊಂಡಿದ್ದರು. 

ಭಕ್ತಿಯೇ ಮುಕ್ತಿಗೆ ಕಾರಣ. ನಿಮ್ಮಲ್ಲಿರುವ ಅಪಾರ ಭಕ್ತಿ-ನಂಬಿಕೆ ನಿಮ್ಮನ್ನು ಗೆಲ್ಲಿಸುತ್ತದೆ ಎಂದು ಬಸವರಾಜ ಶ್ರೀಗಳು ಆಶೀರ್ವಚನ ನುಡಿದರು. ಸಂಗಪ್ಪ ತೋಟದ ಶಾಮನೂರು, ಬಿ. ಬಸವರಾಜ ಕಂಚಿಕೆರೆ, ಕೆ.ಎಂ. ಮಹೇಶಪ್ಪ, ಪಾಟೀಲ್ ಕೆಂಚನಗೌಡರು, ದುದ್ದುಗಾರ ಬಸವರಾಜಪ್ಪ, ಬಾರಿಕರ ಮಂಜಣ್ಣ, ಕೆ.ಬಿ. ಬಸವರಾಜಪ್ಪ, ಮಹಾದೇವಮ್ಮ ಮಲ್ಲಿಕಾರ್ಜುನಪ್ಪ, ಪ್ರಕಾಶ್ ಹೊಸಮನಿ ಇತರರು ಇದ್ದರು.

error: Content is protected !!