ಹೆಚ್ಚುತ್ತಿರುವ ಧರ್ಮ ಕಲಹ : ಲೋಕೇಶ್ ಒಡೆಯರ್ ವಿಷಾದ

ಹೆಚ್ಚುತ್ತಿರುವ ಧರ್ಮ ಕಲಹ : ಲೋಕೇಶ್ ಒಡೆಯರ್ ವಿಷಾದ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಎಂ. ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ದತ್ತಿ ಕಾರ್ಯಕ್ರಮ

ದಾವಣಗೆರೆ, ಮಾ. 4 – ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಲಿಂ. ಚಂದ್ರಮ್ಮ ಮತ್ತು ಲಿಂ. ಮಠದ ಗುರುಸಿದ್ಧಯ್ಯ ಮಲ್ಲಿಗೆರೆ, ಲಿಂ. ಮಠದ ಗೌರಮ್ಮ ಮತ್ತು ಲಿಂ. ಮಠದ ಸಿದ್ದಬಸಯ್ಯ ದಾಸಿ ಕಟ್ಟೆ, ಲಿಂ. ಪಾರ್ವತಮ್ಮ, ಲಿಂ. ಚೆನ್ನಮ್ಮ, ಲಿಂ. ಶಂಕರಮ್ಮ ಮತ್ತು ಲಿಂ. ಮಠದ ಪಂಚಾಕ್ಷರಯ್ಯ ಇವರ ದತ್ತಿ ಕಾರ್ಯಕ್ರಮವನ್ನು ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂಎಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಟಿ. ನಾಗರಾಜ ನಾಯ್ಕ್ ನೆರವೇರಿಸಿದರು. 

`ಶರಣರ ದೃಷ್ಟಿಯಲ್ಲಿ ಜೀವನ ಮೌಲ್ಯಗಳು’ ವಿಷಯದ ಮೇಲೆ ಅನು ಭಾವ ನೀಡಿದ ಸಿರಿಗೆರೆಯ ಎಂಬಿಆರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ನಾ.ಲೋಕೇಶ್ ಒಡೆಯರ್, ಪ್ರಸ್ತುತ ದೇಶದಲ್ಲಿ ಧರ್ಮ ಕಲಹಗಳು ಹೆಚ್ಚಾಗಿವೆ. ಆದರೆ ಶರಣರು ಅಂದೇ ಜಾತಿ ಪದ್ಧತಿಯನ್ನು ವಿರೋಧಿಸಿದ್ದರು ಎಂದರು. 

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶರಣರ ವಚನಗಳ ತಿರುಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ಕೊಟ್ಟರು. ಜಿ.ಎಂ. ಕುಮಾರಸ್ವಾಮಿ ಅವರು ದತ್ತಿದಾನಿಗಳ ಪರಿಚಯ ಮಾಡಿಕೊಟ್ಟರು. ದತ್ತಿದಾನಿಗಳಾದ ಎಂ. ಈಶ್ವರ್ ಶರ್ಮ  ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ವಹಿಸಿಕೊಂಡಿದ್ದರು. 

ಪ್ರಮೀಳಾ ನಟರಾಜ್, ಎಂ. ಪರಮೇಶ್ವರಪ್ಪ ಸಿರಿಗೆರೆ, ಎಸ್ .ಬಿ. ರುದ್ರ ಗೌಡ ಗೋಪನಾಳ್ ಉಪಸ್ಥಿತರಿದ್ದರು. 

ಬಿ.ಟಿ. ಪ್ರಕಾಶ್‌ ವಚನ ಪ್ರಾರ್ಥನೆ ಮಾಡಿದರು. ಡಾ. ಟಿ. ಹಾಲೇಶಪ್ಪ ಸ್ವಾಗತಿಸಿದರೆ, ಪ್ರಶಿಕ್ಷಣಾರ್ಥಿ ಜೆ. ಅಂಜಲಿ  ವಂದಿಸಿದರು. ಪ್ರಶಿಕ್ಷಣಾರ್ಥಿ ಸಂಗೀತ ಹುಳಗುಂಡಿ ನಿರೂಪಿಸಿದರು.

error: Content is protected !!