ನಗರದಲ್ಲಿ ಇಂದು ದೀಪ ಪ್ರಜ್ವಲನೆ ಮತ್ತು ಪ್ರತಿಜ್ಞಾ ವಿಧಿ

ಬಿಎಸ್ಸಿ ನರ್ಸಿಂಗ್‌ ಮತ್ತು ಜಿ.ಎನ್‌.ಎಂ. ವಿದ್ಯಾರ್ಥಿಗಳ 20ನೇ ತಂಡ 2023-24ರ ದೀಪ ಪ್ರಜ್ವಲನೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವು ಎಸ್‌ಎಸ್‌ಐಎಂಎಸ್‌ ಮತ್ತು ಆರ್‌.ಸಿ. ಆಸ್ಪತ್ರೆ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11 ಕ್ಕೆ ನಡೆಯಲಿದೆ.

ನಗರದ ಎಸ್‌.ಎಸ್‌.ಐ.ಎನ್‌.ಎಸ್‌. ಪ್ರಾಂಶುಪಾಲ ವೀರೇಶ್‌ ವಿ.ಬಿ. ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ, ಎಸ್‌.ಎಸ್‌. ಆಸ್ಪತ್ರೆ ಹಿರಿಯ ಶುಶ್ರೂಷಕರಾದ ಶ್ರೀಮತಿ ಗೀತಾ ಬಿ.ಎಂ., ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

error: Content is protected !!