ಕಾಂಗ್ರೆಸ್ ಟಿಕೆಟ್ ನನಗೇ ಸಿಗಲಿದೆ

ಕಾಂಗ್ರೆಸ್ ಟಿಕೆಟ್ ನನಗೇ ಸಿಗಲಿದೆ

ವಿನಯ್‌ ಕುಮಾರ್ ವಿಶ್ವಾಸ

ಹರಪನಹಳ್ಳಿ, ಫೆ. 27 – ನಾನು ಸಂಸದನಾಗಿ ಆಯ್ಕೆಯಾದರೆ ಹರಪನಹಳ್ಳಿಗೆ ಇಂಜಿನಿಯರಿಂಗ್ ಕಾಲೇಜ್ ಮತ್ತು ತಾಲ್ಲೂಕು ಕೇಂದ್ರದಲ್ಲಿ ಐಎಎಸ್, ಕೆಎಎಸ್ ಕೋಚಿಂಗ್ ಸೆಂಟರ್ ತೆರೆಯುವ ಸಂಕಲ್ಪ ಹಾಕಿಕೊಂಡಿದ್ದೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್‍ಕುಮಾರ್‌ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ
ತಾಲ್ಲೂಕಿನ ಗರ್ಭಗುಡಿ  ಬ್ರಿಡ್ಜ್-ಕಂ ಬ್ಯಾರೇಜ್ ಯೋಜನೆಯನ್ನೂ ಸಹ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷ ನಡೆಸಿರುವ ಸಮಿಕ್ಷೆ, ಸರ್ವೇಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿದೆ, ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ಅದರಲ್ಲಿ ನನ್ನ ಹೆಸರು ಬಹುತೇಕ ಖಚಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವ ಮುಖಂಡ ರಾಘು ದೊಡ್ಮನಿ, ಪ್ರಗತಿಪರ ಹೋರಾಟಗಾರ ಹೊಸಳ್ಳಿ ಮಲ್ಲೇಶ್‌, ವಾಲ್ಮೀಕಿ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಎಚ್.ಟಿ. ವನಜಾಕ್ಷಿ ಶಿವಯೋಗಿ ಮಾತನಾಡಿದರು.

ಪುರಸಭೆ ಸದಸ್ಯ ಭರತೇಶ, ಮುಖಂಡರಾದ ಮುತ್ತಿಗಿ ಜಂಬಣ್ಣ, ಖುರ್ಷಿದ್ ಅಹ್ಮದ್, ಗುಡ್ಡಪ್ಪ, ಎಚ್.ಬಿ. ಬಸವರಾಜ, ಸಿದ್ದಪ್ಪ, ಬಸವರಾಜ, ಕೆಂಚಪ್ಪ, ಶಿವಪುತ್ರ, ಲಕ್ಷ್ಮಿಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.

error: Content is protected !!