ಹರಪನಹಳ್ಳಿ, ಫೆ. 27 – ಜೆಸಿಐ ಸ್ಪೂರ್ತಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷೆಯಾಗಿ ಡಾ. ಪ್ರಿಯಾಂಕ ಅಧಿಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಹಾಲಿ ಅಧ್ಯಕ್ಷ ಪರಶುರಾಮ್ ಚಲವಾದಿ ತಿಳಿಸಿದ್ದಾರೆ. ಕಾರ್ಯದರ್ಶಿಯಾಗಿ ಸ್ವರೂಪ ಬಸವರಾಜ್, ಖಜಾಂಚಿ ಯಾಗಿ ಕೆ.ಎಂ.ಸಚಿನ್, ಆಯ್ಕೆಯಾಗಿದ್ದು ಪದಾಧಿಕಾರಿಗಳಾಗಿ ಅಕ್ಷತಾ ನಾಗರಾಜ್, ಅಮೃತಾ ಪ್ರಶಾಂತ್, ಸನ್ಮತಿ ಪರಶುರಾಮ್, ಶೈಲಜ ವೀರೇಶ್, ಶರತ್ ಚಂದ್ರ, ವೀರನಗೌಡ, ಎನ್. ಬಸಪ್ಪ, ಡಾ. ಪ್ರವೀಣ್ ಆಯ್ಕೆಯಾಗಿ ದ್ದಾರೆ. ಜ್ಯೂನಿಯರ್ ಜೆಸಿ ಅಧ್ಯಕ್ಷರಾಗಿ ಸಿರಿ ಗೌರಿ ಅಧಿಕಾರಕ್ಕೆ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಅಧ್ಯಕ್ಷ ಪರಶುರಾಮ್, ಮಾಜಿ ವಲಯಾಧ್ಯಕ್ಷ ಶಿವಕುಮಾರ್, ಟಿ.ಎಂ. ವೀರೇಶ್, ಪ್ರಸನ್ನ ಕುಮಾರ ಜೈನ್, ಇರ್ಷಾದ್ ಭಾಷಾ, ಎಂ. ಅಂಬಣ್ಣ, ರವೀಂದ್ರ ಅಧಿಕಾರ್, ಹೇಮಣ್ಣ ಮೋರಿಗೇರಿ ಮತ್ತಿತರರಿದ್ದರು.
ಜೆಸಿಐ ಅಧ್ಯಕ್ಷರಾಗಿ ಡಾ. ಪ್ರಿಯಾಂಕ
![24 priyanka 28.02.2024 ಜೆಸಿಐ ಅಧ್ಯಕ್ಷರಾಗಿ ಡಾ. ಪ್ರಿಯಾಂಕ](https://janathavani.com/wp-content/uploads/2024/02/24-priyanka-28.02.2024-.jpg)