ಆನ್‌ಲೈನ್‌ನಲ್ಲಿ ಇಂದು ಶರಣ ಚಿಂತನ ಗೋಷ್ಠಿ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆನ್‌ಲೈನ್‌ನಲ್ಲಿ ಶರಣ ಚಿಂತನ ಗೋಷ್ಠಿ-ಸಂಚಿಕೆ 2 ಕಾರ್ಯಕ್ರಮವು ಇಂದು ಸಂಜೆ 7 ರಿಂದ 8.30ರವರೆಗೆ ನಡೆಯಲಿದೆ. ಪರಿಷತ್ತು ಮೈಸೂರು ಘಟಕ ಅಧ್ಯಕ್ಷ ಮ.ಗು. ಸದಾನಂದಯ್ಯ ಅನುಭವ ಮಂಟಪ ಒಂದು ಚಿಂತನೆ ವಿಷಯ ಮಂಡಿಸುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಡಾ.ಎಂ.ಜಿ. ಈಶ್ಚರಪ್ಪ ಮುಖ್ಯ ಅತಿಥಿಗಳ ನುಡುಗಳಾನ್ನಾಡುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷೀಯ ನುಡಿಗಳನ್ನಾಡುವರು. ಬಾಪೂಜಿ ಪಾಲಿಟೆಕ್ನಿಕ್‌ ಸಿವಿಲ್‌ ವಿಭಾಗದ ಪ್ರೊ. ಸುಶೀಲ ಬಸವರಾಜ್‌ ವಂದಿಸುವರು. ಪರಿಷತ್ ನಗರ ಘಟಕದ ಕಾರ್ಯದರ್ಶಿ ಭರಮಪ್ಪ ಮೈಸೂರು ನಿರೂಪಿಸಿದರು.

error: Content is protected !!