ದಾವಣಗೆರೆ, ಫೆ. 25- ಇಲ್ಲಿನ ರಾಮನಗರದ ಕಾಳಮ್ಮ ದೇವಸ್ಥಾನದ ಆವರಣದಲ್ಲಿ ಸಂಚಾರಿ ಆರೋಗ್ಯ ವಾಹನದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಸುಮಾರು 170 ಜನರಿಗೆ ಜ.ಜ.ಮು. ವೈದ್ಯಕೀಯ ವಿದ್ಯಾಲಯದ ನುರಿತ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ ಹಾಗೂ ಸಮಾಲೋಚನೆ ನಡೆಸಲಾಯಿತು.
ರಕ್ತದ ಸಕ್ಕರೆ ತಪಾಸಣೆ, ಬಿ.ಪಿ ತಪಾಸಣೆ, ಇ.ಸಿ.ಜಿ ಪರೀಕ್ಷೆ, ನೇತ್ರ ತಪಾಸಣೆ, ಹೃದಯ ತಪಾಸಣೆ ಹಾಗು ನುರಿತ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ, ಉಚಿತ ಔಷಧಿಯೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಉಚಿತ ಎಸ್ಎಸ್ ಕೇರ್ ಟ್ರಸ್ಟ್ ಕಾರ್ಡ್ ವಿತರಿಸಲಾಯಿತು.
ಜನರಿಗೆ ಬಾಪೂಜಿಯ ಮೋದಿ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಕಾರ್ಡ್ ನೀಡಲಾಯಿತು.