ನಗರದಲ್ಲಿ ಇಂದು ಶಿಕ್ಷಕರಿಗೆ ಕ್ಯಾನ್ಸರ್ – ಎಚ್. ಪಿ.ವಿ ಲಸಿಕೆ ಜಾಗೃತಿ

ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಭಾಗದ ಶಾಲಾ ಶಿಕ್ಷಕರಿಗೆ ಜೆಜೆಎಂಸಿ ಕಾಲೇಜು ಆವರಣದಲ್ಲಿ ಕ್ಯಾನ್ಸರ್ ಮತ್ತು ಎಚ್. ಪಿ.ವಿ ಲಸಿಕೆ ಜಾಗೃತಿ ಕಾರ್ಯಕ್ರಮವನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಎಸ್ ಕೇರ್ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸುವರು. ಅತಿಥಿಗಳಾಗಿ ಡಿಡಿಪಿಐ ಜಿ.ಕೊಟ್ರೇಶ್, ಡಾ. ಮೂಗನಗೌಡ ಪಾಟೀಲ್, ಡಾ. ಶಾಂತಲಾ, ಡಾ. ಲತಾ, ಡಾ. ಶೋಭಾ ಧನಂಜಯ,  ಡಾ. ಧನ್ಯಕುಮಾರ್ ಭಾಗವಹಿಸುವರು.

error: Content is protected !!