ಆಹಾರ ಚಿಕಿತ್ಸೆ : ಇಂದು ಉಪನ್ಯಾಸ

ಭಾರತ ವಿಕಾಸ ಪರಿಷದ್ ಸ್ವಾಮಿ ವಿವೇಕಾನಂದ ಶಾಖೆ ವತಿಯಿಂದ ಇಂದು ಸಂಜೆ 6 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ‘ಆಹಾರ ಚಿಕಿತ್ಸೆ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋಲಾರದ ಜೀವ ಸಂಜೀವನ ನ್ಯಾಚುರಲ್ ಲೈಫ್ ಸಂಸ್ಥೆಯ ಸಂಸ್ಥಾಪಕರೂ, ಆಹಾರ ತಜ್ಞರೂ ಆದ ಆರ್.ರಾಜಶೇಖರ್ ಅವರು, ‘ಕ್ರಮಬದ್ಧ ಆಹಾರ ಮತ್ತು ಜೀವನ ಶೈಲಿಯಿಂದ ಯಾವುದೇ ಔಷಧಿಗಳಿಲ್ಲದೇ ಕಾಯಿಲೆ ರಹಿತ ಜೀವನ ಸಾಧ್ಯ’  ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಖೆಯ ಅಧ್ಯಕ್ಷ ಎಲ್.ವಿ.ನಾಗಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶಾಖೆಯ ಕಾರ್ಯದರ್ಶಿ ಕೆ.ಶಿವಶಂಕರ್ ತಿಳಿಸಿದ್ದಾರೆ.

error: Content is protected !!