ರಾಣೇಬೆನ್ನೂರು,ಫೆ.20- ಇಲ್ಲಿನ ಶ್ರೀ ರೇಣುಕಾ ಅರ್ಬನ್ ಕೋ ಆಪ್ ಸೊಸೈಟಿಯ ರಜತ ಮಹೋತ್ಸವ ಸಮಾರಂಭವು ಇದೇ ದಿನಾಂಕ 25ರಂದು ರಾಮಕೃಷ್ಣಾಶ್ರಮದ ಶ್ರೀ ಪ್ರಕಾಶಾನಂದ ಮಹಾರಾಜರ ಸಾನ್ನಿಧ್ಯದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ವಿ.ಪಿ.ಲದ್ವಾ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಅರುಣಕುಮಾರ ಪೂಜಾರ, ವರ್ತಕ ಬಸವರಾಜ ಪಟ್ಟಣಶೆಟ್ಟಿ, ಸಹಕಾರ ಸಂಘ ಗಳ ಉಪನಿಬಂಧಕ ಅಜ್ಮತ್ವುಲ್ಲಾ ಖಾನ್, ಸಹಾಯಕ ನಿಬಂಧಕ ವಿಕ್ರಮ ಕುಲ್ಕರ್ಣಿ ಭಾಗವಹಿಸುವರು ಎಂದು ಅಧ್ಯಕ್ಷ ವಿ.ಪಿ. ಲದ್ವಾ ತಿಳಿಸಿದ್ದಾರೆ.
July 23, 2024